ADVERTISEMENT

ರೈಲು ಹಳಿತಪ್ಪಲು ಸಮಯೋಚಿತ ನಿರ್ವಹಣೆ ಕೊರತೆ ಕಾರಣ: ಸಿಎಜಿ  

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2022, 16:29 IST
Last Updated 25 ಡಿಸೆಂಬರ್ 2022, 16:29 IST
...
...   

ನವದೆಹಲಿ:ಭಾರತೀಯರೈಲ್ವೆಯ ಎಂಜಿನಿಯರಿಂಗ್‌ ವಿಭಾಗವು ಕಾಲ ಕಾಲಕ್ಕೆ ರೈಲು ಮಾರ್ಗಗಳಲ್ಲಿ ಹಳಿಗಳ ನಿರ್ವಹಣೆ ಮಾಡದಿರುವುದೇ ರೈಲುಗಳು ಹಳಿತಪ್ಪುವ ಘಟನೆಗಳು ಸಂಭವಿಸಲು ಪ್ರಮುಖ ಕಾರಣ ಎಂದು ಭಾರತದ ಮಹಾಲೇಖಪಾಲರ(ಸಿಎಜಿ) ವರದಿ ಹೇಳಿದೆ.

ರೈಲು ಹಳಿಗಳ ಸಮಯೋಚಿತ ನಿರ್ವಹಣಾ ಕೆಲಸಗಳಿಗೆ ಮತ್ತುಪ್ರಬಲ ಮೇಲ್ವಿಚಾರಣೆಗೆ ಸುಧಾರಿತ ತಂತ್ರಜ್ಞಾನಗಳು ಹಾಗೂ ಸಂಪೂರ್ಣ ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಭಾರತೀಯ ರೈಲ್ವೆಗೆಸಿಎಜಿ ಸೂಚನೆ ನೀಡಿದೆ.

ಭಾರತೀಯ ರೈಲ್ವೆಯ 2017-18ರಿಂದ 2020-21ರ ಅವಧಿಯಕಾರ್ಯಕ್ಷಮತೆ ಕುರಿತು ಸಿದ್ಧಪಡಿಸಿರುವ ‘ಭಾರತೀಯ ರೈಲ್ವೆಯಲ್ಲಿ ಹಳಿ ತಪ್ಪುವಿಕೆ’ ವರದಿಯಲ್ಲಿ ಸಿಎಜಿ, ಹಳಿಗಳ ಕಳಪೆ ನಿರ್ವಹಣೆ, ಅತೀ ವೇಗ ಹಾಗೂ ತಾಂತ್ರಿಕ ವೈಫಲ್ಯಗಳು ರೈಲುಗಳು ಹಳಿ ತಪ್ಪಲು ಪ್ರಮುಖ ಕಾರಣಗಳಾಗಿವೆ ಎಂದು ಹೇಳಿದೆ.

ADVERTISEMENT

ಹಳಿ ತಪ್ಪುವಿಕೆಯ ಒಟ್ಟು 422 ಪ್ರಕರಣಗಳು ಸಂಭವಿಸಿದ್ದು, ಇದಕ್ಕೆಎಂಜಿನಿಯರಿಂಗ್ ವಿಭಾಗ ಹೊಣೆಯಾಗಿದೆ. ಇದರಲ್ಲಿ 171 ಪ್ರಕರಣಗಳು ಹಳಿಗಳ ನಿರ್ವಹಣೆಗೆ ಸಂಬಂಧಿಸಿದವು. ಇನ್ನು 156 ಪ್ರಕರಣಗಳು ಅನುಮತಿಸಿದ ಮಾನದಂಡ ಮೀರಿದ ಪರಿಣಾಮ ಸಂಭವಿಸಿದಂತವು ಆಗಿವೆ ಎಂದು ವರದಿಯಲ್ಲಿ ಹೇಳಿದೆ.

ಅಲ್ಲದೇ, ರೈಲ್ವೆಯ ಆದ್ಯತಾ ಕಾಮಗಾರಿಗಳಿಗೆ ವರ್ಷದಿಂದ ವರ್ಷಕ್ಕೆ ಅನುದಾನ ಕಡಿತ ಮಾಡುತ್ತಿರುವ ಪ್ರವೃತ್ತಿ ಮುಂದುವರಿದಿರುವುದನ್ನು ಸಿಎಜಿವರದಿಯಲ್ಲಿ ಬೊಟ್ಟು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.