ADVERTISEMENT

ರಾಜಸ್ಥಾನದಲ್ಲಿ ಪ್ರವಾಹ, ಐದು ಬಲಿ

ಪಿಟಿಐ
Published 16 ಆಗಸ್ಟ್ 2019, 14:44 IST
Last Updated 16 ಆಗಸ್ಟ್ 2019, 14:44 IST
   

ಜೈಪುರ: ರಾಜಸ್ಥಾನದ ಹಾಡೌತೀ ಪ್ರಾಂತದಲ್ಲಿ ಗುರುವಾರದಿಂದ ಭಾರಿ ಮಳೆಯಾಗುತ್ತಿದೆ. ರಾಜ್ಯದಲ್ಲಿ ಮಳೆ ಸಂಬಂಧಿ ಅವಘಡಗಳಲ್ಲಿ 5 ಜನರು ಮೃತಪಟ್ಟಿದ್ದಾರೆ.

ಹಾಡೌತೀ ಪ್ರಾಂತದಲ್ಲಿ ಪ್ರವಾಹದ ಸ್ಥಿತಿ ತಲೆದೋರಿದೆ. ಈ ಪ್ರಾಂತದ ವ್ಯಾಪ್ತಿಯಲ್ಲಿರುವಜೋಧಪುರ, ನಾಗೌರ್ ಮತ್ತು ಪಾಲಿ ಜಿಲ್ಲೆಗಳಲ್ಲಿ ಶನಿವಾರ ಸಂಜೆವರೆಗೆ ‘ರೆಡ್‌ ಅಲರ್ಟ್’ ಘೋಷಿಸಲಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನಧವಾಗಿರುವಂತೆ ಸೇನೆಗೆ ಸೂಚನೆ ನೀಡಲಾಗಿದೆ.

ಕೋಟಾ, ಬರಾನ್, ಬಿಲ್ವಾರಾ ಮತ್ತು ಬುಂದಿ ಜಿಲ್ಲೆಗಳಲ್ಲಿ ಗುರುವಾರದಿಂದ ಶುಕ್ರವಾರ ಸಂಜೆವರೆಗೆ 160 ಮಿಲಿಮೀಟರ್ ಮಳೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.