ADVERTISEMENT

ಕಾನೂನು ತಜ್ಞ, ಮಾಜಿ ಕಾನೂನು ಸಚಿವ ಶಾಂತಿ ಭೂಷಣ್‌ ಇನ್ನಿಲ್ಲ

ಪಿಟಿಐ
Published 31 ಜನವರಿ 2023, 15:42 IST
Last Updated 31 ಜನವರಿ 2023, 15:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರದ ಮಾಜಿ ಕಾನೂನು ಸಚಿವ, ಕಾನೂನು ತಜ್ಞ, 97 ವರ್ಷ ವಯಸ್ಸಿನ ಶಾಂತಿಭೂಷಣ್‌ ಮಂಗಳವಾರ ನಿಧನರಾದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರದಲ್ಲಿ 1977 ರಿಂದ 1979ರವರೆಗೂ ಅವರು ಕಾನೂನು ಸಚಿವರಾಗಿದ್ದರು. ಸಾರ್ವಜನಿಕ ಮಹತ್ವದ ಹಲವು ಪ್ರಕರಣಗಳಲ್ಲಿ ವಕಾಲತ್ತು ವಹಿಸಿದ್ದರು.

ಇವರ ಇಬ್ಬರು ಮಕ್ಕಳಾದ ಜಯಂತ್‌ ಮತ್ತು ಪ್ರಶಾಂತ್ ಭೂಷಣ್‌ ಅವರೂ ಹೆಸರಾಂತ ವಕೀಲರಾಗಿದ್ದಾರೆ.

ADVERTISEMENT

ಇತ್ತೀಚಿನವರೆಗೂ ಸಕ್ರಿಯರಾಗಿದ್ದ ಅವರು ರಫೇಲ್‌ ಯುದ್ಧವಿಮಾನ ಖರೀದಿಗೆ ಸಂಬಂಧಿಸಿದಂತೆ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ವಿಚಾರಣೆ ನಡೆದಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರವಾಗಿಯೂ ವಾದ ಮಂಡಿಸಿದ್ದರು.

ಚುನಾವಣಾ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧವನ್ನು ಹೇರಿದ್ದ ಅಲಹಾಬಾದ್‌ ಹೈಕೋರ್ಟ್‌ನ ಪ್ರಕರಣದಲ್ಲಿ ಅರ್ಜಿದಾರರಾಗಿದ್ದ ರಾಜ್‌ ನಾರಾಯಣ್‌ ಪರವಾಗಿ ಶಾಂತಿಭೂಷಣ್‌ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.