ADVERTISEMENT

ಎನ್‌ಸಿಬಿಸಿ ಅಧ್ಯಕ್ಷರಾಗಿ ಮಾಜಿ ಕೇಂದ್ರ ಸಚಿವ ಹಂಸರಾಜ್ ನೇಮಕ

ಪಿಟಿಐ
Published 2 ಡಿಸೆಂಬರ್ 2022, 14:31 IST
Last Updated 2 ಡಿಸೆಂಬರ್ 2022, 14:31 IST
ಹಂಸರಾಜ್ ಅಹಿರ್
ಹಂಸರಾಜ್ ಅಹಿರ್   

ನವದೆಹಲಿ:ಕೇಂದ್ರದ ಮಾಜಿ ಸಚಿವ ಹಂಸರಾಜ್ ಅಹಿರ್ ಅವರು ಶುಕ್ರವಾರ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ (ಎನ್‌ಸಿಬಿಸಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ಸಮಾಜದಲ್ಲಿ ಉಳಿದವರಿಗೆ ಸರಿಸಮನಾಗಿ ಹಿಂದುಳಿದ ವರ್ಗಗಳನ್ನು ತರುವುದು ಒಂದು ಸವಾಲು ಮತ್ತು ಜವಾಬ್ದಾರಿಯುತ ಕೆಲಸವಾಗಿದೆ.ಪ್ರಧಾನಿ ನರೇಂದ್ರ ಮೋದಿಯವರ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ’ ಘೋಷಣೆಯನ್ನು ಗಮನದಲ್ಲಿಟ್ಟುಕೊಂಡು, ಸಮಾಜದ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಅಹಿರ್‌ ಹೇಳಿದ್ದಾರೆ.

ಅಹಿರ್ ಅವರು 2014–19ರ ಅವಧಿಯಲ್ಲಿ ಗೃಹ ವ್ಯವಹಾರಗಳ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.