ನವದೆಹಲಿ: ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹೊಸದಾಗಿ ಐವರು ಜಂಟಿ ನಿರ್ದೇಶಕರನ್ನು ಕೇಂದ್ರ ಸರ್ಕಾರ ನೇಮಕಾತಿ ಮಾಡಿದೆ.
ಐಪಿಎಸ್ ಅಧಿಕಾರಿಗಳಾದ ಸಂಪತ್ ಮೀನಾ, ಅನುರಾಗ್, ರಾಕೇಶ್ ಅಗರ್ವಾಲ್, ವಿಯೋಲಸ್ ಕುಮಾರ್ ಚೌಧರಿ ಮತ್ತು ಡಿ.ಸಿ.ಜೈನ್ ಅವರನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ಬುಧವಾರ ಆದೇಶ ಹೊರಡಿಸಿದೆ.
ಐವರು ಅಧಿಕಾರಿಗಳ ಪೈಕಿ ಅನುರಾಗ್, ಅಗರ್ವಾಲ್ ಮತ್ತು ಜೈನ್ ಈ ಮೊದಲು ಸಿಬಿಐನಲ್ಲಿ ಎಸ್ಪಿ, ಡಿಐಜಿ ಮಟ್ಟದ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದರು.
ಮೀನಾ, ಅನುರಾಗ್, ಅಗರ್ವಾಲ್ ಅವರು ಜಾರ್ಖಂಡ್, ತ್ರಿಪುರ ಮತ್ತು ಹಿಮಾಚಲಪ್ರದೇಶ ಕೇಡರ್ನ 1994ರ ಬ್ಯಾಚಿನ ಅಧಿಕಾರಿಗಳಾಗಿದ್ದಾರೆ. ಜೈನ್ ಅವರು ರಾಜಸ್ತಾನ ಕೇಡರ್ನ 1991ರ ಬ್ಯಾಚ್ ಹಾಗೂ ಚೌಧರಿ ಅವರು ಜಮ್ಮು ಮತ್ತು ಕಾಶ್ಮೀರ ಕೇಡರ್ನ 1997ನೇ ಬ್ಯಾಚಿನ ಅಧಿಕಾರಿಯಾಗಿದ್ದಾರೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.