ಅಹಮದಾಬಾದ್: ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಗೂಢಚಾರಿಕೆಗೆ ಸಹಕರಿಸಿದ ಆರೋಪದ ಮೇಲೆ 53 ವರ್ಷದ ವ್ಯಕ್ತಿಯನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶುಕ್ರವಾರ ಬಂಧಿಸಿದೆ.
ಶಂಕಿತ ಆರೋಪಿ ಪಾಕಿಸ್ತಾನ ಮೂಲದವರಾಗಿದ್ದು, ದಶಕದ ಹಿಂದೆಯೇ ಭಾರತೀಯ ಪೌರತ್ವ ಪಡೆದಿದ್ದಾರೆ.
ಆನಂದ್ ಜಿಲ್ಲೆಯ ತಾರಾಪುರದ ನಿವಾಸಿ ಲಾಭಶಂಕರ ಮಹೇಶ್ವರಿ ಬಂಧಿತ ಆರೋಪಿ. ಮಿಲಿಟರಿ ಗುಪ್ತಚರ ಸಂಸ್ಥೆಯಿಂದ ಪಡೆದ ಮಾಹಿತಿ ಆಧರಿಸಿ ಎಟಿಎಸ್ ಅಧಿಕಾರಿಗಳು ಈ ವ್ಯಕ್ತಿಯನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.