ಜುನಾಘಡ್: ಗುಜರಾತಿನ ಜುನಾಗಡ ಜಿಲ್ಲೆಯ ಮಧುಪುರ ಗ್ರಾಮದಲ್ಲಿ ಸಿಂಹ ದಾಳಿ ನಡೆಸಿದ್ದರಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಬಹಾದ್ದೂರ್ಬಾಯಿ ಜೀವಭಾಯಿ (35) ಎಂಬುವವರುಮಾವಿನ ತೋಟದ ಗುಡಿಸಲಿನ ಹೊರಗೆ ಮಲಗಿದ್ದರು. ಶುಕ್ರವಾರ ಮಧ್ಯರಾತ್ರಿ 1ರ ವೇಳೆಗೆ ಸಿಂಹವೊಂದು ಅಲ್ಲಿಯೇ ಕಟ್ಟಿಹಾಕಿದ್ದ ಮೇಕೆಯ ಮೇಲೆ ದಾಳಿ ಮಾಡಲು ಯತ್ನಿಸಿತು. ಈ ವೇಳೆ ಎಚ್ಚರಗೊಂಡ ಅವರು ಮೇಕೆಯನ್ನು ರಕ್ಷಿಸಲು ಮುಂದಾದಾಗ ಸಿಂಹ ದಾಳಿ ನಡೆಸಿ ಕೊಂದು ಹಾಕಿತುಜುನಾಗಡದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ದುಷ್ಯಂತ್ ವಾಸವಾಡ ತಿಳಿಸಿದ್ದಾರೆ.
ಘಟನೆಯ ನಂತರ ಅರಣ್ಯ ಇಲಾಖೆ ತಂಡವು ಸಿಂಹವನ್ನು ಸೆರೆ ಹಿಡಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.