ADVERTISEMENT

ಜ್ಞಾನವಾಪಿ ಪ್ರಕರಣ: ವಿಚಾರಣೆ 30ಕ್ಕೆ ಮುಂದೂಡಿಕೆ

ಪಿಟಿಐ
Published 26 ಮೇ 2022, 13:53 IST
Last Updated 26 ಮೇ 2022, 13:53 IST
ಜ್ಞಾನವಾಪಿ ಮಸೀದಿ
ಜ್ಞಾನವಾಪಿ ಮಸೀದಿ   

ವಾರಾಣಸಿ: ಜ್ಞಾನವಾಪಿ- ಶೃಂಗಾರ್ ಗೌರಿ ಸಂಕೀರ್ಣ ಪ್ರಕರಣದ ಕುರಿತು ಗುರುವಾರ ಮುಸ್ಲಿಂ ಪರ ವಾದವನ್ನು ಆಲಿಸಿದ ಇಲ್ಲಿನ ಜಿಲ್ಲಾ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 30ರಂದು ನಿಗದಿಪಡಿಸಿದೆ.

‘ಪ್ರಕರಣದ ನಿರ್ವಹಣೆಯ ಕುರಿತು ಮುಸ್ಲಿಂ ಕಡೆಯ ವಾದಗಳು ಗುರುವಾರ ಅಪೂರ್ಣವಾಗಿವೆ. ಹಾಗಾಗಿ, ಮೇ 30ರಂದು ನಡೆಯುವ ವಿಚಾರಣೆಯಲ್ಲಿ ವಾದ ಮುಂದುವರಿಯಲಿದೆ’ ಎಂದು ಜಿಲ್ಲಾ ಸರ್ಕಾರಿ ವಕೀಲ ರಾಣಾ ಸಂಜೀವ್ ಸಿಂಗ್ ಮಾಹಿತಿ ನೀಡಿದ್ದಾರೆ.

ಜ್ಞಾನವಾಪಿ- ಶೃಂಗಾರ್ ಗೌರಿ ಸಂಕೀರ್ಣ ಪ್ರಕರಣದ ನಿರ್ವಹಣೆಯ ಕುರಿತು ವಿಚಾರಣೆಯನ್ನು ಮೇ 26ರಂದು ಕೈಗೆತ್ತಿಕೊಳ್ಳಲಾಗುವುದು ಎಂದು ಈ ಹಿಂದೆ ನ್ಯಾಯಾಲಯವು ತಿಳಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.