ADVERTISEMENT

ಚಂಡೀಗಡ ವರ್ಗಾಯಿಸುವ ವಿಚಾರ: ಪಂಜಾಬ್‌ ವಿರುದ್ಧ ಹರಿಯಾಣ ಸರ್ವಾನುಮತದ ನಿರ್ಣಯ  

ಪಿಟಿಐ
Published 5 ಏಪ್ರಿಲ್ 2022, 14:13 IST
Last Updated 5 ಏಪ್ರಿಲ್ 2022, 14:13 IST
ಮನೋಹರ್‌ ಲಾಲ್‌ ಖಟ್ಟರ್‌
ಮನೋಹರ್‌ ಲಾಲ್‌ ಖಟ್ಟರ್‌   

ಚಂಡೀಗಡ (ಪಿಟಿಐ):ಕೇಂದ್ರಾಡಳಿತ ಪ್ರದೇಶವಾದ ಚಂಡೀಗಡವನ್ನು ಪಂಜಾಬ್‌ಗೆ ವರ್ಗಾಯಿಸುವ ಸಂಬಂಧ ಪಂಜಾಬ್‌ ವಿಧಾನಸಭೆ ಕೈಗೊಂಡ ನಿರ್ಣಯದ ವಿರುದ್ಧ ಹರಿಯಾಣ ವಿಧಾನಸಭೆ ಮಂಗಳವಾರ ಸರ್ವಾನುಮತದಿಂದ ನಿರ್ಣಯವೊಂದನ್ನು ಅಂಗೀಕರಿಸಿದೆ.

ಸುಮಾರು ಮೂರು ಗಂಟೆಗಳ ಚರ್ಚೆಯ ನಂತರ ಸರ್ಕಾರದ ಈ ನಿರ್ಣಯವನ್ನು ಸರ್ವಾನುಮತದ ಅಂಗೀಕರಿಸಲಾಯಿತು.

‘ಚಂಡೀಗಡವನ್ನು ಶೀಘ್ರವೇ ಪಂಜಾಬ್‌ಗೆ ಸೇರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡುವುದಾಗಿ ಪಂಜಾಬ್‌ ಸರ್ಕಾರ ಕೈಗೊಂಡಿರುವ ನಿರ್ಣಯವನ್ನು ಹರಿಯಾಣ ವಿರೋಧಿಸುತ್ತದೆ. ಇದು ರಾಜ್ಯದ ಜನತೆಗೆ ಸ್ವೀಕಾರಾರ್ಹವಲ್ಲ’ ಎಂದು ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್‌ ಅವರು ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿದ್ದರು.

ADVERTISEMENT

ಕೇಂದ್ರದ ಸೇವಾ ನಿಯಮಗಳು ಕೇಂದ್ರಾಡಳಿತ ಪ್ರದೇಶ ಚಂಡೀಗಡದಲ್ಲಿನ ಉದ್ಯೋಗಿಗಳಿಗೂ ಅನ್ವಯಿಸುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇತ್ತೀಚಿಗೆ ಹೊರಡಿಸಿದ ಪ್ರಕಟಣೆಯು ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.