ADVERTISEMENT

ಕೃಷಿ ಕಾಯ್ದೆ ವಿರುದ್ಧ ಧರಣಿ: ಟಿಕ್ರಿ ಗಡಿ ಬಳಿ ಲಾರಿ ಹರಿದು 3 ರೈತ ಮಹಿಳೆಯರ ಸಾವು

ಪಿಟಿಐ
Published 28 ಅಕ್ಟೋಬರ್ 2021, 6:16 IST
Last Updated 28 ಅಕ್ಟೋಬರ್ 2021, 6:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬಹದೂರ್‌ಗಡ (ಹರಿಯಾಣ): ಕೃಷಿ ಕಾಯ್ದೆಗಳ ವಿರುದ್ಧ ಟಿಕ್ರಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮೂರಿಗೆ ತೆರಳುತ್ತಿದ್ದ ರೈತ ಮಹಿಳೆಯರ ಮೇಲೆ ಲಾರಿಯೊಂದು ಹರಿದು ಮೂವರು ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡ ಘಟನೆ ಇಲ್ಲಿನ ಪಕೋಡಾ ಚೌಕದಲ್ಲಿ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಹಿಳೆಯರು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿರುವ ತಮ್ಮ ಹಳ್ಳಿಗಳತ್ತ ಹೊರಟಿದ್ದರು. ಬಹದೂರ್‌ಗಡ ರೈಲ್ವೆ ನಿಲ್ದಾಣಕ್ಕೆ ತೆರಳಲು ಪಕೋಡಾ ಚೌಕದ ಬಳಿ ಆಟೊ ರಿಕ್ಷಾಗಾಗಿ ಕಾಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ, ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಛಿಂದೇರ್ ಕೌರ್(60), ಅಮರ್ಜೀತ್ ಕೌರ್(58) ಮತ್ತು ಗೌರಮೈಲ್ ಕೌರ್(60) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಮಾನ್ಸಾ ಜಿಲ್ಲೆಯ ಖೀವಾ ದ್ಯಾಲುವಾಲಾ ಹಳ್ಳಿಯವರು. ಗಾಯಗೊಂಡ ಮಹಿಳೆಯರನ್ನು ರೋಹ್ಟಕ್‌ನ ಪಿಜಿಐ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.