ADVERTISEMENT

ದೆಹಲಿ ಹಿಂಸಾಚಾರ: ಸಿಬಿಎಸ್‌ಸಿ ಪರೀಕ್ಷೆ ಮುಂದೂಡಲು ಕೋರ್ಟ್ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 12:43 IST
Last Updated 26 ಫೆಬ್ರುವರಿ 2020, 12:43 IST
   

ನವದೆಹಲಿ: ಉತ್ತರ ದೆಹಲಿಯಲ್ಲಿ ಹಿಂಸಾಚಾರ ನಡೆಯತ್ತಿರುವಹಿನ್ನೆಲೆಯಲ್ಲಿಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕವೇ ಪರಿಷ್ಕೃತ ಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟಿಸುವಂತೆದೆಹಲಿ ಹೈಕೊರ್ಟ್‌ ಸಿಬಿಎಸ್‌ಸಿಗೆ ಹೇಳಿದೆ.

ಇಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿನಡೆಯಬೇಕಿದ್ದ 10ನೇ ಮತ್ತು 12ನೇ ತರಗತಿಯ ಪರೀಕ್ಷೆಯನ್ನು 10 ರಿಂದ15 ದಿನಗಳವರೆಗೆ ಮುಂದೂಡುವ ಸಾಧ್ಯತೆಗಳಿವೆ.

ದೆಹಲಿಯಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ, ಮೃತರ ಸಂಖ್ಯೆಯಲ್ಲಿಏರಿಕೆಯಾಗಿದೆ ಆದ್ದರಿಂದಸಿಬಿಎಸ್‌ಸಿಯು ಪರೀಕ್ಷೆಯನ್ನು ಘೋಷಿಸಲು 10ರಿಂದ15 ದಿನಗಳಕಾಲಾವಕಾಶ ಬೇಕಾಗಬಹುದುಎಂದು ನ್ಯಾಯಮೂರ್ತಿರಾಜೀವ್ಶಕ್ದಾರ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.