ADVERTISEMENT

ಹಿಂದಿ ಸಾಹಿತಿ ನಾಮವರ್ ಸಿಂಗ್ ನಿಧನ

ಪಿಟಿಐ
Published 20 ಫೆಬ್ರುವರಿ 2019, 20:33 IST
Last Updated 20 ಫೆಬ್ರುವರಿ 2019, 20:33 IST

ನವದೆಹಲಿ: ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹಿಂದಿಯ ಹಿರಿಯ ಸಾಹಿತಿ ನಾಮವರ್ ಸಿಂಗ್ (92) ಅವರು ಮಂಗಳವಾರ ರಾತ್ರಿ ನಿಧನರಾದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ನಾಮವರ್ ಸಿಂಗ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ತಿಂಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ಅವರು ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

‘ಮೂರು ವಾರಗಳಿಂದ ಕೃತಕ ಉಸಿರಾಟದಲ್ಲಿದ್ದ ಅವರು ಮಂಗಳವಾರ ರಾತ್ರಿ 11.51ಕ್ಕೆ ನಿಧನರಾದರು’ ಎಂದು ಪುತ್ರಿ ಸಮೀಕ್ಷಾ ತಿಳಿಸಿದ್ದಾರೆ.

ADVERTISEMENT

‘ಛಾಯಾವಾದ್’, ‘ಇತಿಹಾಸ್ ಔರ್ ಆಲೋಚನಾ’, ‘ಕಹಾನಿ ನಯಿ ಕಹಾನಿ’, ‘ಕವಿತಾ ಕೆ ನಯೆ ಪ್ರತಿಮಾನ್’, ‘ದೂಸರಿ ಪರಂಪರಾ ಕಿ ಖೋಜ್’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.

‘ಸಿಂಗ್ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಕುಟುಂಬ ಮತ್ತು ಹಿಂದಿ ಸಾಹಿತ್ಯ ಲೋಕಕ್ಕೆ ನನ್ನ ಸಂತಾಪವಿದೆ’ ಎಂದು ಕೋವಿಂದ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.