ಹೈದರಾಬಾದ್: ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸಲು ವಿದ್ಯಾರ್ಥಿಗಳ ಬಳಿ ಹಣದ ಬೇಡಿಕೆಯಿಟ್ಟಿದ್ದ ಇಲ್ಲಿನ ಒಸ್ಮಾನಿಯಾ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಒಸ್ಮಾನಿಯಾ ಕಾಲೇಜಿನ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಬಿ. ಬಾಲಾಜಿ ಬಂಧಿತ ಆರೋಪಿ. ವಿದ್ಯಾರ್ಥಿಗಳು ಗುರುವಾರ ನೀಡಿದ್ದ ದೂರನ್ನು ಆಧರಿಸಿ ಪ್ರಾಧ್ಯಾಪಕರ ಕಚೇರಿ ಮತ್ತು ಮನೆಯ ಮೇಲೆ ಎಸಿಬಿ ದಾಳಿ ನಡೆಸಿತ್ತು.
ಪಾಸಾಗಲು ಪ್ರತಿ ವಿದ್ಯಾರ್ಥಿ ತಲಾ ₹ 50 ಸಾವಿರ ನೀಡಬೇಕು ಎಂದು ಆರ್. ಶ್ರೀನು ಎಂಬುವರ ಅಕೌಂಟ್ ನಂಬರ್ ಅನ್ನು ಪ್ರಾಧ್ಯಾಪಕರು ವಾಟ್ಸ್ ಆ್ಯಪ್ ಮೂಲಕ ವಿದ್ಯಾರ್ಥಿಗಳಿಗೆ ಶೇರ್ ಮಾಡಿದ್ದರು. ಹಣ ವರ್ಗಾಯಿಸಿ ಅದರ ಸ್ಕ್ರೀನ್ಶಾಟ್ ಕಳುಹಿಸುವಂತೆಯೂ ಸೂಚಿಸಿದ್ದರು. ಅದರಂತೆ ಕೆಲ ವಿದ್ಯಾ ರ್ಥಿಗಳು ಹಣ ವರ್ಗಾವಣೆ ಮಾಡಿ ಎಸಿಬಿಗೆ ದೂರು ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.