ADVERTISEMENT

ಗೌರವ ಮತ್ತು ಸಮಾನತೆ ತತ್ವದಲ್ಲಿ ನಂಬಿಕೆ: ರಾಜನಾಥ್ ಸಿಂಗ್

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 14:31 IST
Last Updated 9 ಜನವರಿ 2023, 14:31 IST
 ರಾಜನಾಥ್ ಸಿಂಗ್
ರಾಜನಾಥ್ ಸಿಂಗ್   

ನವದೆಹಲಿ: ಭಾರತ ವಿದೇಶಗಳೊಂದಿಗೆ ಗೌರವ ಮತ್ತು ಸಮಾನತೆ ತತ್ವದಲ್ಲಿ ನಂಬಿಕೆಯನ್ನು ಹೊಂದಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಹೇಳಿದ್ದಾರೆ.

‘ಏರೋ ಇಂಡಿಯಾ 2023’ ಕಾರ್ಯಕ್ರಮದ ರಾಯಭಾರಿಗಳ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಏಷ್ಯಾದ ಅತಿದೊಡ್ಡ ಏರೋಸ್ಪೇಸ್ ಪ್ರದರ್ಶನ ಎಂದೇ ಖ್ಯಾತಿಯಾಗಿರುವ ‘ಏರೋ ಇಂಡಿಯಾ’ದ 14ನೇ ಆವೃತ್ತಿಯ ಫೆಬ್ರುವರಿ ತಿಂಗಳ 13ರಿಂದ 17ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

ADVERTISEMENT

ಈ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಮೇಕ್ ಇನ್ ಇಂಡಿಯಾ ಭಾರತಕ್ಕೆ ಮಾತ್ರ ಎನ್ನುವ ವಿಷಯವಲ್ಲ ಬದಲಿಗೆ ಇದು ‘ಮೇಕ್ ಫಾರ್ ದಿ ವರ್ಲ್ಡ್‌’ ಉದ್ದೇಶವನ್ನು ಹೊಂದಿದೆ ಎಂದರು.

ನಮ್ಮ ಸ್ವಾವಲಂಬನೆಯಾದ ಮೇಕ್‌ ಇನ್‌ ಇಂಡಿಯಾ ಉಪಕ್ರಮವು ನಮ್ಮ ಪಾಲುದಾರ ದೇಶಗಳೊಂದಿಗೆ ‘ಹೊಸ ಮಾದರಿಯಾಗಿದೆ. ನಮ್ಮ ಪಾಲುದಾರ ದೇಶಗಳೊಂದಿಗೆ ರಕ್ಷಣಾ ಸಾಧನಗಳನ್ನು ಖರೀದಿಸುವ ಹಾಗೂ ತಾಂತ್ರಿಕ ಜ್ಞಾನವನ್ನೂ ಹಂಚಿಕೊಳ್ಳುವುದು ಆಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.