ನವದೆಹಲಿ: ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ(ಐಐಟಿ) ಪ್ರಾಧ್ಯಾಪಕ ದಿನೇಶ್ ಮೋಹನ್ ಅವರು(75) ಕೋವಿಡ್ನಿಂದ ಶುಕ್ರವಾರ ನಿಧನರಾದರು ಎಂದು ಐಐಟಿ ನಿರ್ದೇಶಕ ವಿ.ರಾಮ್ಗೋಪಾಲ್ ರಾವ್ ಅವರು ತಿಳಿಸಿದರು.
‘ರಸ್ತೆ ಸುರಕ್ಷತೆ ಮತ್ತು ಅಪಘಾತ ತಡೆಗಟ್ಟುವಿಕೆ ಬಗೆಗಿನ ತಜ್ಞರಾದ ದಿನೇಶ್ ಅವರು ಸಂತ ಸ್ಟೀಫನ್ ಆಸ್ಪತ್ರೆಯಲ್ಲಿ ಕೋವಿಡ್ಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ ಶುಕ್ರವಾರ ಮುಂಜಾನೆ ಅವರಿಗೆ ಹೃದಯಾಘಾತ ಸಂಭವಿಸಿದೆ’ ಎಂದು ಅವರು ಹೇಳಿದರು.
ಈ ಬಗ್ಗೆ ಸಂತಾಪ ಸೂಚಿಸಿರುವ ಇತಿಹಾಸ ತಜ್ಞ ಇರ್ಫಾನ್ ಹಬೀಬ್, ‘ನಾವಿಬ್ಬರು ಇತಿಹಾಸ ಮತ್ತು ವಿಜ್ಞಾನದ ಕುರಿತಾಗಿ ಗಂಭೀರವಾಗಿ ಚರ್ಚಿಸುತ್ತಿದ್ದೆವು’ ಎಂದು ಟ್ವೀಟ್ ಮಾಡಿದ್ದಾರೆ.
ಬೈಕ್ನ ಹೆಲ್ಮೆಟ್ ವಿನ್ಯಾಸದಲ್ಲಿ ಆಧುನೀಕರಣ, ಸೈಕಲ್ ಸವಾರರು ಮತ್ತು ಪಾದಚಾರಿಗಳ ಸುರಕ್ಷತೆ, ವಾಹನ ಅಪಘಾತ ಮತ್ತು ರಸ್ತೆ ಸುರಕ್ಷತೆ ಸಂಶೋಧನೆ ಮತ್ತು ಹೆದ್ದಾರಿ ಅಪಘಾತಗಳ ವಿಶ್ಲೇಷಣೆ ಸೇರಿದಂತೆ ಹಲವು ರಸ್ತೆ ಸುರಕ್ಷತೆ ಸಂಬಂಧಿತ ವಿಷಯಗಳಿಗಾಗಿ ದಿನೇಶ್ ಜನಪ್ರಿಯತೆ ಪಡೆದಿದ್ದರು.
ಮೋಹನ್ ಅವರು ಐಐಟಿ ಬಾಂಬೆ ಮತ್ತು ಮಿಚಿಗನ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.