ADVERTISEMENT

ಜೈ ಶ್ರೀರಾಮ್ ಪಠಿಸುತ್ತೇನೆ, ತಾಕತ್ತಿದ್ದರೆ ಬಂಧಿಸಿ: ಮಮತಾಗೆ ಸವಾಲೆಸೆದ ಅಮಿತ್ ಶಾ

ಏಜೆನ್ಸೀಸ್
Published 13 ಮೇ 2019, 10:05 IST
Last Updated 13 ಮೇ 2019, 10:05 IST
   

ಪಶ್ಚಿಮಬಂಗಾಳ: ‘ಜೈ ಶ್ರೀರಾಮ್‌ ಪಠಿಸುತ್ತೇನೆ..ತಾಕತ್ತಿದ್ದರೆ,ನನ್ನನ್ನು ಬಂಧಿಸಿ’ಎಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಅಮಿತ್‌ ಶಾ ಸವಾಲು ಹಾಕಿದರು.

ಕಳೆದ ವಾರ ಪಶ್ವಿಮ ಬಂಗಾಳದಲ್ಲಿಮಮತಾ ಬ್ಯಾನರ್ಜಿ ವಾಹನ ಹಾದು ಹೋಗುವಾಗ ಜೈ ಶ್ರೀರಾಮ್ ಕೂಗಿದ್ದಕ್ಕೆ ಮೂವರನ್ನು ಬಂಧಿಸಿಲಾಗಿತ್ತು.ಜಾಯ್‌ನಗರ್‌ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಅವರುಈ ಘಟನೆಯನ್ನು ಉಲ್ಲೇಖಿಸಿ ಅವರು ಮಾತನಾಡಿದರು.

‘ಯಾರಾದರೂ ಜೈ ಶ್ರೀರಾಮ್‌ ಎಂದರೆ, ಮಮತಾ ಅವರಿಗೆ ಸಿಟ್ಟು ಬರುತ್ತದೆ. ನಾನು ಈಗ ಇಲ್ಲಿ ಜೈ ಶ್ರೀರಾಮ್‌ ಎನ್ನುತ್ತೇನ. ನಿಮಗೆ (ಮಮತಾ) ಧೈರ್ಯವಿದ್ದರೆ, ನನ್ನನ್ನು ಬಂಧಿಸಿ. ನಾಳೆಯೂ ನಾನು ಕೋಲ್ಕತ್ತದಲ್ಲಿಯೇ ಇರುತ್ತೇನೆ’ ಎಂದು ಹೇಳಿದ್ದಾರೆ.

ADVERTISEMENT

ಬರುಯಿಪುರದಲ್ಲಿ ಅಮಿತ್‌ ಶಾ ಚಾಪರ್‌ ಇಳಿಸುವುದಕ್ಕೆ ಟಿಎಂಸಿ ಸರ್ಕಾರ ಅನುಮತಿ ನಿರಾಕರಿಸಿದ್ದರ ಬಗ್ಗೆ ಟೀಕಿಸಿದ ಶಾ, ‘ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಗೊಂದಲಕ್ಕೀಡಾಗಿರುವಂತೆ ಕಾಣುತ್ತಿದೆ. ನನ್ನನ್ನು ರ್‍ಯಾಲಿಗೆ ಹೋಗದಂತೆ ಅವರು ತಡೆಯಬೇಕಿದೆ. ರ್‍ಯಾಲಿಯಲ್ಲಿ ಭಾಗವಹಿಸುವುದನ್ನು ಅವರು ತಡೆಯಬಹುದು ಆದರೆ, ಬಂಗಾಳದಲ್ಲಿ ಬಿಜೆಪಿ ವಿಜಯಯಾತ್ರೆಯನ್ನು ನಿಲ್ಲಿಸಲು ಸಾಧ್ಯವಿಲ್ಲ’ ಎಂದರು.

ಅಮಿತ್‌ ಶಾ ಅವರ ಹೆಲಿಕಾಪ್ಟರ್‌ ಇಳಿಯುವುದಕ್ಕೆ ಅನುಮತಿ ಸಿಗದಿದ್ದರಿಂದ ಜಾದವಪುರ ಲೋಕಸಭಾ ಕ್ಷೇತ್ರದಲ್ಲಿ ಸೋಮವಾರ ನಡೆಯಬೇಕಿದ್ದ ಅವರ ಚುನಾವಣಾ ರ್‍ಯಾಲಿಯನ್ನು ರದ್ದುಪಡಿಸಿ,ಬರುಯಿಪುರದಲ್ಲಿಹಮ್ಮಿಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.