ನವದೆಹಲಿ: ‘ಇಂಡಿಯಾ‘ ಎಂಬ ಹೆಸರನ್ನು ‘ಭಾರತ್‘ ಎಂದು ಬಳಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಪರ ಹಾಗೂ ವಿರೋಧದ ಚರ್ಚೆಗಳು ನಡೆದ ಬೆನ್ನಲ್ಲೇ, ಇದೇ ವಿಷಯವಾಗಿ ಹಲವು ವರ್ಷಗಳ ಹಿಂದೆ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ವಿಡಿಯೊ ಒಂದು ಈಗ ಎಲ್ಲೆಡೆ ಹರಿದಾಡುತ್ತಿದೆ.
ಜಿ20 ಶೃಂಗದಲ್ಲಿ ಪಾಲ್ಗೊಳ್ಳಲಿರುವ ವಿಶ್ವದ ಪ್ರಮುಖ ನಾಯಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭೋಜನಕೂಟಕ್ಕೆ ಆಹ್ವಾನಿಸಿದ್ದಾರೆ. ಅವರ ಆಹ್ವಾನ ಪತ್ರಿಕೆ ವಾಡಿಕೆಯಂತಿರದೆ, ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ನಮೂದಿಸಿರುವುದು ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರ ವಾಕ್ ಸಮರಕ್ಕೆ ಕಾರಣವಾಗಿದೆ.
ಇಂಡಿಯಾ ಹಾಗೂ ಭಾರತ್ ನಡುವಿನ ಚರ್ಚೆಗಳು ನಡೆದಿರುವಾಗಲೇ ಲಾಲೂ ಪ್ರಸಾದ್ ಯಾದವ್ ಅವರ ಹಳೆಯ ವಿಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಲ್ಲು ಸ್ವಚ್ಛಗೊಳಿಸಲು ಬಬೂಲ್ ಕಡ್ಡಿಯನ್ನು ಬಳಸುವ ಲಾಲೂ, 'ಇದು ನಮ್ಮ ಊರಿಗೆ ಬಂದರೆ ಮಾತ್ರ ಸಿಗಲಿದೆ. ದೆಹಲಿಯಲ್ಲಿ ಸಿಗದು. ದೆಹಲಿ ಇಂಡಿಯಾ ಅಲ್ವಾ... ನಮ್ಮದು ಭಾರತ. ಇಲ್ಲಿ ಮಾತ್ರ ಇದು ಸಿಗುತ್ತದೆ‘ ಎಂದಿರುವುದು ಈಗ ಈ ಚರ್ಚೆಯ ಕಾವನ್ನು ಇನ್ನಷ್ಟು ಹೆಚ್ಚಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.