ನವದೆಹಲಿ: ‘ಆಭರಣ ಮತ್ತು ಬಣ್ಣದ ರತ್ನದ ಕಲ್ಲುಗಳ ತಯಾರಿಕೆ ಹಾಗೂ ರಫ್ತಿನಲ್ಲಿ ತೊಡಗಿರುವ ಜೈಪುರ ಜುವೆಲ್ಲರಿ, ಜೆಮ್ಸ್ ಸಮೂಹದ ಮೇಲೆ ಈಚೆಗೆ ಆದಾಯ ತೆರಿಗೆ ಇಲಾಖೆ (ಐಟಿ) ನಡೆಸಿದ ದಾಳಿಯಲ್ಲಿ ಲೆಕ್ಕಕ್ಕೆ ಸಿಗದ ₹ 500 ಕೋಟಿಗೂ ಹೆಚ್ಚಿನ ಆದಾಯ ಪತ್ತೆಯಾಗಿದೆ’ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಬುಧವಾರ ತಿಳಿಸಿದೆ.
ದಾಳಿಯ ಸಮಯದಲ್ಲಿ ಇಲಾಖೆಯು ₹ 4 ಕೋಟಿ ನಗದು ಹಾಗೂ ₹ 9 ಕೋಟಿ ಮೌಲ್ಯದ ಚಿನ್ನಾಭರಣವನ್ನೂ ವಶಪಡಿಸಿಕೊಂಡಿದೆ.
ನ. 23ರಿಂದ ಶುರುವಾಗಿದ್ದ ದಾಳಿಯಲ್ಲಿ ಇಲಾಖೆಯು ಸುಮಾರು 50 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
‘ಇಲ್ಲಿಯವರೆಗೆ₹ 72 ಕೋಟಿಯನ್ನು ಮಾತ್ರ ಗುಂಪು ಘಟಕಗಳು ತಮ್ಮ ಬಹಿರಂಗಪಡಿಸದ ಆದಾಯವೆಂದು ಒಪ್ಪಿಕೊಂಡಿವೆ’ ಎಂದು ಸಿಬಿಡಿಟಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.