ADVERTISEMENT

ಜೈರಾಮ್‌ ರಮೇಶ್‌ಗೆ ಸಮನ್ಸ್‌

ಪಿಟಿಐ
Published 2 ಮಾರ್ಚ್ 2019, 18:38 IST
Last Updated 2 ಮಾರ್ಚ್ 2019, 18:38 IST

ನವದೆಹಲಿ: ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಮ್‌ ರಮೇಶ್‌, ‘ಕಾರವನ್‌’ ನಿಯತ ಕಾಲಿಕೆ ಸಂಪಾದಕ ಮತ್ತು ವರದಿಗಾರರಿಗೆ ಏಪ್ರಿಲ್‌ 25ರಂದು ಹಾಜರಾಗುವಂತೆ ದೆಹಲಿ ನ್ಯಾಯಾಲಯ ಸಮನ್ಸ್‌ ನೀಡಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್‌ ದೋಭಾಲ್‌ ಪುತ್ರ ವಿವೇಕ್‌ ಅವರು ನಿಯತಕಾಲಿಕೆ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು. ಬ್ರಿಟನ್‌ನ ಕೇಮನ್‌ ದ್ವೀಪದಲ್ಲಿ ವಿವೇಕ್‌ ಹಣ ಹೂಡಿಕೆ ಮಾಡಿದ್ದಾರೆ ಎಂದು ‘ಕಾರವನ್‌’ ನಿಯತಕಾಲಿಕೆ ಲೇಖನ ಪ್ರಕಟಿಸಲಾಗಿತ್ತು. ಬಳಿಕ, ಜೈರಾಮ್‌ ರಮೇಶ್‌ ಅವರು ಪತ್ರಿಕಾಗೋಷ್ಠಿ ನಡೆಸಿ ವಿವರಿಸಿದ್ದರು.

ಈ ಬಗ್ಗೆ ಜನವರಿ 30ರಂದು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದ ವಿವೇಕ್‌,ಎಲ್ಲ ಆರೋಪಗಳು ಆಧಾರರಹಿತ ಮತ್ತು ಸತ್ಯಕ್ಕೆ ದೂರ ಎಂದು ಪ್ರತಿಪಾದಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.