ADVERTISEMENT

'ಆಜಾದ್ ಕಾಶ್ಮೀರ': ಹೇಳಿಕೆ ಹಿಂಪಡೆದ ಕೆ.ಟಿ.ಜಲೀಲ್‌

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 15:55 IST
Last Updated 13 ಆಗಸ್ಟ್ 2022, 15:55 IST
ಕೆ.ಟಿ. ಜಲೀಲ್‌
ಕೆ.ಟಿ. ಜಲೀಲ್‌   

ತಿರುವನಂತಪುರ: ಸಾಮಾಜಿಕ ಮಾಧ್ಯಮಗಳಲ್ಲಿ ನೀಡಿದ್ದ 'ಆಜಾದ್ ಕಾಶ್ಮೀರ' ಹೇಳಿಕೆಯನ್ನು ಕೇರಳದ ಶಾಸಕ ಕೆ.ಟಿ. ಜಲೀಲ್‌ ಅವರು ಶನಿವಾರ ಹಿಂಪಡೆದಿದ್ದಾರೆ.

'ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕುರಿತ ಹೇಳಿಕೆಯು ತಪ್ಪು ತಿಳಿವಳಿಕೆಗೆ ಕಾರಣವಾಗಿತ್ತು ಮತ್ತು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿತ್ತು, ಈ ಕಾರಣಕ್ಕೆ ಅದನ್ನು ಹಿಂಪಡೆದುಕೊಳ್ಳುತ್ತೇನೆ' ಎಂದು ಅವರು ಹೇಳಿದ್ದಾರೆ.

ಜಲೀಲ್‌ ಅವರ ಹೇಳಿಕೆಯು ಸಿಪಿಎಂನ ನಿಲುವು ಅಲ್ಲ ಎಂದು ಕೇರಳದ ಸಚಿವ ಎಂ.ವಿ. ಗೋವಿಂದನ್‌ ಸ್ಪಷ್ಟಪಡಿಸಿದ ಬಳಿಕ ಜಲೀಲ್‌ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಜಲೀಲ್‌ ಅವರ ಹೇಳಿಕೆಗೆ ಭಾರಿ ಟೀಕೆ ವ್ಯಕ್ತವಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.