ADVERTISEMENT

ಎನ್‌ಕೌಂಟರ್‌ಗೆ ಉಗ್ರರ ಬಲಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 17:49 IST
Last Updated 30 ಜುಲೈ 2019, 17:49 IST
   

ಶ್ರೀನಗರ: ಜೈಷ್‌ ಎ ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆಯ ಕಮಾಂಡರ್‌ ಸೇರಿ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.

ಅನಂತನಾಗ್‌ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಜೆಇಎಂ ಕಮಾಂಡರ್‌ ಫಯಾಜ್‌ ಪಂಝೂ ಮತ್ತು ಈತನ ಸಹಚರ ಮೃತಪಟ್ಟಿದ್ದಾನೆ. ಜೂನ್‌ 12 ರಂದು ಅನಂತನಾಗ್‌ನಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆದ ದಾಳಿಯಲ್ಲಿ ಪಂಝೂ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಕ್‌ ಗುಂಡಿಗೆ ಯೋಧ ಹುತಾತ್ಮ
ಜಮ್ಮು: ರಾಜೌರಿ ಜಿಲ್ಲೆಯ ತಾಗ್ದಾರ್‌ ಪ್ರದೇಶದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆಭಾರತೀಯ ಯೋಧ ಹುತಾತ್ಮರಾಗಿದ್ದಾರೆ.

ADVERTISEMENT

ನಾಯಕ್‌ ಕೃಷ್ಣ ಲಾಲ್‌ (34) ಹುತಾತ್ಮರಾದವರು. ಜಮ್ಮು – ಕಾಶ್ಮೀರ ರಾಜ್ಯದ ಅಖನೂರ್‌ ಜಿಲ್ಲೆಯ ಘಗ್ರಿಯಾಲ್‌ ಗ್ರಾಮದವರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.