ಲಖನೌ: ಆಕಳು ಸಗಣಿ ವಿಲೇವಾರಿ ವಿಷಯಕ್ಕೆ ನಡೆದ ವಾಗ್ವಾದ ಪತ್ರಿಕಾ ಛಾಯಾಗ್ರಾಹಕ ಹಾಗೂ ಆತನ ಸಹೋದರನ ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರಪ್ರದೇಶದ ಸಹರನ್ಪುರ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ದೈನಿಕ ಜಾಗರಣ್ ಪತ್ರಿಕೆಯ ಛಾಯಾಗ್ರಾಹಕ ಆಶೀಶ್ (23) ಹಾಗೂ ಆತನ ಸಹೋದರ ಅಶುತೋಷ್ (19) ಕೊಲೆಯಾದ ದುರ್ದೈವಿಗಳು.
ಸಗಣಿ ವಿಲೇವಾರಿ ಮಾಡುವುದಕ್ಕೆ ಸಂಬಂಧಿಸಿ ಆಶೀಶ್, ಅಶುತೋಷ್ ಹಾಗೂ ನೆರೆ ಮನೆಯಲ್ಲಿ ವಾಸವಾಗಿ
ರುವ ಮಹಿಪಾಲ್ ಸೈನಿ ಎಂಬುವವರ ನಡುವೆ ವಾಗ್ವಾದ ನಡೆದಿದೆ. ಅದು ವಿಕೋಪಕ್ಕೆ ಹೋದ ಸಂದರ್ಭದಲ್ಲಿ ಮಹಿಪಾಲ್ ತಮ್ಮ ಪುತ್ರರೊಂದಿಗೆ ಆಶೀಶ್ ಮನೆಯೊಳಗೆ ಹೊಕ್ಕು ಇಬ್ಬರ ಮೇಲೂ ಗುಂಡಿನ ಮಳೆಗೆರೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.