ಪುಣೆ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡುವ ವಿಚಾರ ತಿಳಿದಿದ್ದ ಮಹಾಕಾಲ್ ಅಲಿಯಾಸ್ ಸಿದ್ದೇಶ್ ಕಾಂಬ್ಳೆ ಎಂಬಾತನನ್ನು ಪುಣೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
‘ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸದಸ್ಯನಾಗಿದ್ದ ಗ್ಯಾಂಗ್ಸ್ಟರ್ ವಿಕ್ರಮ್ ಬ್ರಾರ್ ಅವರೊಂದಿಗೆ ಸಿದ್ದೇಶ್ ನಿಕಟ ಸಂಪರ್ಕ ಹೊಂದಿದ್ದ. ಮೂಸೆವಾಲಾ ಹತ್ಯೆಯ ಒಂದು ವಾರಕ್ಕೂ ಮುನ್ನ ಬ್ರಾರ್ ಜತೆಗೆ ಈತ ಸಂಪರ್ಕದಲ್ಲಿದ್ದ, ಹತ್ಯೆಯ ವಿಚಾರವೂ ಈತನಿಗೆ ಮೊದಲೇ ತಿಳಿದಿತ್ತು’ ಎಂದು ಮಹಾರಾಷ್ಟ್ರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.