ADVERTISEMENT

ವಾಹನದಡಿಯಲ್ಲಿ ಯುವತಿ ಎಳೆದೊಯ್ದ ಪ್ರಕರಣ: ಆರೋಪಿಗೆ ಸಹಕರಿಸಿದ ವ್ಯಕ್ತಿಗೆ ಜಾಮೀನು

ಪಿಟಿಐ
Published 7 ಜನವರಿ 2023, 14:33 IST
Last Updated 7 ಜನವರಿ 2023, 14:33 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ (ಪಿಟಿಐ): ಕಾರಿನಡಿ ಸಿಲುಕಿದ್ದ ಯುವತಿಯನ್ನು 12 ಕಿ.ಮೀ ಎಳೆದೊಯ್ದ ಪ್ರಕರಣದ ಒಬ್ಬ ಆರೋಪಿಯು ಅಡಗಿಕೊಳ್ಳಲು ಸಹಕರಿಸಿದ್ದ ಅಂಕುಶ್‌ ಖನ್ನಾ ಅವರಿಗೆ ನ್ಯಾಯಾಲಯವು ಶನಿವಾರ ಜಾಮೀನು ನೀಡಿದೆ.

‘ಖನ್ನಾ ಮೇಲಿರುವ ಆರೋಪಗಳು ಜಾಮೀನು ನೀಡಬಹುದಾದ ಆರೋಪಗಳಾಗಿವೆ’ ಎಂದು ಅಭಿಪ್ರಾಯಪಟ್ಟ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟರ್‌ ಸಾನ್ಯಾ ದಲಾಲ್‌ ಅವರು ಖನ್ನಾ ಅವರಿಗೆ ಜಾಮೀನು ನೀಡಿದರು.

‘ತನಿಖಾಧಿಕಾರಿಯು ಕರೆದಾಗ ತನಿಖೆಗೆ ಹಾಜರಾಗಬೇಕು. ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಿರಬೇಕು. ಜೊತೆಗೆ ಸಾಕ್ಷ್ಯ ನಾಶ ಮಾಡಲು ಯತ್ನಿಸಬಾರದು’ ಎಂದೂ ನ್ಯಾಯಾಧೀಶರು ಖನ್ನಾ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.