ಕೊಚ್ಚಿ (ಕೇರಳ): ಅತ್ಯಂತ ಕ್ರೂರ ಕೃತ್ಯವೊಂದರಲ್ಲಿ, ಸಾಕು ನಾಯಿಯನ್ನು ಕಾರಿಗೆ ಕಟ್ಟಿ ಹಾಕಿ ರಸ್ತೆಯಲ್ಲಿ ಎಳೆದಾಡಿದ ವ್ಯಕ್ತಿಯೊಬ್ಬನನ್ನುಕೇರಳದಲ್ಲಿ ಬಂಧಿಸಲಾಗಿದೆ.
ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನೊಬ್ಬ ಇದನ್ನು ಪ್ರತಿಭಟಿಸಿದ ಬಳಿಕ ಆಪಾದಿತ ವ್ಯಕ್ತಿ ಕೌರ್ಯ ಕೃತ್ಯವನ್ನು ಕೊನೆಗೊಳಿಸಿದರು.
ಪ್ರಸ್ತುತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪ್ರಾಣಿ ದಯಾಪರ ಸೇರಿದಂತೆ ಸಾಮಾಜಿಕ ವಲಯಗಳಿಂದ ವ್ಯಾಪಕ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಸಾಕು ನಾಯಿಯ ಮೇಲೆ ಕರುಣೆಯಿಲ್ಲದೆ ಇಂತಹ ನಿರ್ದಯ ಕೃತ್ಯ ಎಸಗಿರುವ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ದೂರು ದಾಖಲಿಸಿದರು.
ಎರ್ನಾಕುಳಂನ ಕೊಚ್ಚಿಯಲ್ಲಿ ಶುಕ್ರವಾರ ಘಟನೆ ನಡೆದಿದೆ. ನಾಯಿಯ ಕುತ್ತಿಗೆಗೆ ಹಗ್ಗವನ್ನು ಬಿಗಿದು ಕಾರಿನ ಹಿಂಬದಿಯ ಢಿಕ್ಕಿಗೆ ಕಟ್ಟಿ ಹಾಕಿ ರಸ್ತೆಯಲ್ಲಿ ಎಳೆದಾಡಲಾಗಿತ್ತು.
ಯೂಸುಫ್ ಎಂಬಾತನೇ ಈ ಹೇಯ ಕೃತ್ಯ ಎಸಗಿದ್ದಾನೆ. ಇದನ್ನು ಗಮನಸಿದ ಬೈಕ್ ಸವಾರ ಅಖಿಲ್ ಎಂಬಾತನು ವಿಡಿಯೊ ಸೆರೆ ಹಿಡಿದಿದ್ದಾನೆ.
ಸಾಕು ನಾಯಿಯ ದೇಹದಲ್ಲಿ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿ ಆರೈಕೆ ಮಾಡಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.