ADVERTISEMENT

ಲಕ್ಷಣ್‌ ಝೂಲಾ: ಸಂಚಾರ ನಿಷೇಧ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 18:25 IST
Last Updated 12 ಜುಲೈ 2019, 18:25 IST
   

ಡೆಹ್ರಾಡೂನ್‌: ಉತ್ತರ ಖಂಡದ ಹೃಷಿಕೇಶದಲ್ಲಿ ಗಂಗಾನದಿಗೆ ನಿರ್ಮಿಸಿರುವ ಲಕ್ಷಣ್‌ ಝೂಲಾ (ತೂಗು ಸೇತುವೆ) ಶಿಥಿಲಗೊಂಡಿದ್ದು, ಇದರಲ್ಲಿ ಸಂಚಾರ ನಿಷೇಧಿಸಲಾಗಿದೆ.

ಸೇತುವೆಗೆ ಹೆಚ್ಚಿನ ಭಾರ ತಾಳುವ ಸಾಮರ್ಥ್ಯವಿಲ್ಲ ಕೂಡಲೇ ಸಂಚಾರ ನಿಷೇಧಿಸಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದರು.

ಸೇತುವೆ ದಾಟುವ ಪಾದಚಾರಿಗಳ ಸಂಖ್ಯೆ ಈಚೆಗೆ ಹೆಚ್ಚಾಗಿದ್ದು, ಸೇತುವೆಯ ಗೋಪುರಗಳು ವಾಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

1923ರಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಇದರ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.