ADVERTISEMENT

‘ಮೋದಿ ಆಧುನಿಕ ಔರಂಗಜೇಬ’

ಪಿಟಿಐ
Published 8 ಮೇ 2019, 19:27 IST
Last Updated 8 ಮೇ 2019, 19:27 IST

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ‘ಔರಂಗಜೇಬನ ಆಧುನಿಕ ಅವತಾರ’ ಎಂದು ಕಾಂಗ್ರೆಸ್‌ ಮುಖಂಡ ಸಂಜಯ ನಿರುಪಮ್‌ ಆರೋಪಿಸಿದ್ದಾರೆ.

‘ಆಧುನಿಕ ಕಾಲದ ಔರಂಗಜೇಬನನ್ನು ಈ ಕ್ಷೇತ್ರದ ಮತದಾರರು ಆಯ್ಕೆ ಮಾಡಿದ್ದರು. ಆದರೆ, ಅವರು ವಿವಿಧ ಕಾರಿಡಾರ್‌ಗಳ ಹೆಸರಿನಲ್ಲಿ ನೂರಾರು ದೇವಾಲಯಗಳನ್ನು ಇಲ್ಲಿ ಧ್ವಂಸ ಮಾಡಿದ್ದಾರೆ. ಹಾಗಾಗಿ ಅವರು ಆಧುನಿಕ ಔರಂಗಜೇಬ’ ಎಂದು ನಿರುಪಮ್‌ ಹೇಳಿದ್ದಾರೆ.

ಬಿಜೆಪಿ ಇದಕ್ಕೆ ತಿರುಗೇಟು ನೀಡಿದೆ. ಆಕ್ರಮಣಕಾರರು ಭಾರತಕ್ಕೆ ಏನು ಮಾಡಿದ್ದರು ಎಂಬುದನ್ನು ನೆನಪಿಸುವುದೇ ತನಗೆ ಉಪಯುಕ್ತ ಎಂದು ಕಾಂಗ್ರೆಸ್‌ ಭಾವಿಸಿದೆ. ಇಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ರಾಜಕೀಯಕ್ಕೆ ಬಳಸುತ್ತಿದೆ ಎಂದು ಆಕ್ಷೇಪಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.