ADVERTISEMENT

ಅಕ್ಬರ್‌, ತೇಜಪಾಲ್‌ ಸದಸ್ಯತ್ವ ಅಮಾನತು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 17:56 IST
Last Updated 12 ಡಿಸೆಂಬರ್ 2018, 17:56 IST

ನವದೆಹಲಿ: ಕೇಂದ್ರದ ಮಾಜಿ ಸಚಿವ ಎಂ.ಜೆ. ಅಕ್ಬರ್‌ ಮತ್ತು ತೆಹಲ್ಕಾ ಮಾಜಿ ಸಂಪಾದಕ ತರುಣ್‌ ತೇಜಪಾಲ್‌ ಅವರ ಸದಸ್ಯತ್ವವನ್ನು ಭಾರತೀಯ ಸಂಪಾದಕರ ಒಕ್ಕೂಟ ಅಮಾನತುಗೊಳಿಸಿದೆ.

ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವಅಕ್ಬರ್‌, ತೇಜಪಾಲ್‌ಹಾಗೂ ಹಿರಿಯ ಪತ್ರಕರ್ತ ಗೌತಮ್‌ ಅಧಿಕಾರಿ ವಿರುದ್ಧ ಯಾವರೀತಿಯ ಕ್ರಮಕೈಗೊಳ್ಳಬೇಕು ಎನ್ನುವ ಬಗ್ಗೆ ಅಭಿಪ್ರಾಯ ನೀಡುವಂತೆ ಒಕ್ಕೂಟವು ಕಾರ್ಯಕಾರಿ ಸಮಿತಿಯನ್ನು ಕೋರಿತ್ತು.

ಅಕ್ಬರ್‌ ಮತ್ತು ತೇಜಪಾಲ್‌ ಅವರ ಸದಸ್ಯತ್ವವನ್ನು ಅಮಾನತುಗೊಳಿಸುವಂತೆ ಸಮಿತಿಯ ಬಹುತೇಕ ಸದಸ್ಯರು ಅಭಿಪ್ರಾಯಪಟ್ಟಿದ್ದರು. ಹೀಗಾಗಿ, ಒಕ್ಕೂಟದ ಪದಾಧಿಕಾರಿಗಳು ಚರ್ಚೆ ನಡೆಸಿ ಅಕ್ಬರ್‌ ಮತ್ತು ತೇಜಪಾಲ್‌ ಅವರ ಸದಸ್ಯತ್ವವನ್ನು ಅಮಾನತುಗೊಳಿಸಿದ್ದಾರೆ.

ADVERTISEMENT

ಗೌತಮ್‌ ಅಧಿಕಾರಿಯ ಸದಸ್ಯತ್ವದ ಬಗ್ಗೆ ನಿರ್ಧಾರ ಕೈಗೊಳ್ಳುವ ಮುನ್ನ ಅವರಿಂದ ಉತ್ತರ ಪಡೆಯಲು ಒಕ್ಕೂಟ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.