ತಿರುವನಂತಪುರ: ಕೇರಳ ಸಿಪಿಎಂನ ನೂತನ ರಾಜ್ಯ ಕಾರ್ಯದರ್ಶಿಯಾಗಿ ಎಂ.ವಿ. ಗೋವಿಂದನ್ ಅವರನ್ನು ಭಾನುವಾರ ನೇಮಕ ಮಾಡಲಾಗಿದೆ.
ಹಾಲಿ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರು ಆರೋಗ್ಯ ಕಾರಣಗಳಿಂದಾಗಿ ತಮ್ಮನ್ನು ಸ್ಥಾನದಿಂದ ಕೈಬಿಡಬೇಕೆಂದು ಕೇಳಿಕೊಂಡ ನಂತರ, ಗೋವಿಂದನ್ ಅವರು ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಪಾಲಿಟ್ ಬ್ಯುರೊ ಸದಸ್ಯರಾದ ಪ್ರಕಾಶ್ ಕಾರಟ್, ಎಂ.ಎ. ಬೇಬಿ, ಎ. ವಿಜಯ ರಾಘವನ್ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಭೆಯಲ್ಲಿ ಇದ್ದರು.
ಗೋವಿಂದನ್ ಅವರು ಪ್ರಸ್ತುತ ತಳಿಪ್ಪರಂಬ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಪಿಣರಾಯಿ ವಿಜಯನ್ ಸರ್ಕಾರದಲ್ಲಿ ಸ್ಥಳೀಯ ಸ್ವಯಂ ಸರ್ಕಾರಗಳು ಮತ್ತು ಅಬಕಾರಿ ಸಚಿವರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.