ADVERTISEMENT

ಮದ್ರಾಸ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವರ್ಗಾವಣೆಗೆ ವಿರೋಧ: ಸಿಜೆಐಗೆ ಪತ್ರ

ಪಿಟಿಐ
Published 12 ನವೆಂಬರ್ 2021, 15:59 IST
Last Updated 12 ನವೆಂಬರ್ 2021, 15:59 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಚೆನ್ನೈ: ಮುಖ್ಯ ನ್ಯಾಯಮೂರ್ತಿಸಂಜೀಬ್‌ ಬ್ಯಾನರ್ಜಿ ಅವರನ್ನು ಮೇಘಾಲಯ ಹೈಕೋರ್ಟ್‌ಗೆ ವರ್ಗಾವಣೆ ಮಾಡುವ ಪ್ರಸ್ತಾವನೆಗೆಮದ್ರಾಸ್‌ ಹೈಕೋರ್ಟ್‌ ವಕೀಲರು ವಿರೋಧ ವ್ಯಕ್ತಪಡಿಸಿದ್ದು,ಈ ಸಂಬಂಧ ಸಿಜೆಐಗೆ ಪತ್ರ ಬರೆದಿದ್ದಾರೆ.

ಸಿಜೆ ಬ್ಯಾನರ್ಜಿ ಅವರನ್ನು ವರ್ಗಾವಣೆ ಮಾಡುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿ 200ಕ್ಕೂ ಹೆಚ್ಚು ವಕೀಲರು ಸಹಿ ಹಾಕಿದ ಪತ್ರವನ್ನು ಸಿಜೆಐ ಎನ್‌.ವಿ.ರಮಣ ಮತ್ತುಸುಪ್ರೀಂ ಕೋರ್ಟ್‌ನ ಕೊಲಿಜಿಯಂಗೆ ಕಳುಹಿಸಲಾಗಿದೆ.

‘ವರ್ಗಾವಣೆ ನಿರ್ಧಾರವು ಪ್ರಾಮಾಣಿಕ ಮತ್ತು ನಿರ್ಭೀತಿಯಿಂದ ನಿರ್ಧಾರ ತೆಗೆದುಕೊಳ್ಳುವನ್ಯಾಯಾಧೀಶರ ವಿರುದ್ಧದ ದಂಡದ ಕ್ರಮವಾಗಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.