ADVERTISEMENT

ಮಹಾರಾಷ್ಟ್ರ: ಪ್ರವಾಹದಲ್ಲಿ ‍ಕೊಚ್ಚಿ ಹೋದ ಬಸ್‌, ಓರ್ವ ಸಾವು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 11:37 IST
Last Updated 28 ಸೆಪ್ಟೆಂಬರ್ 2021, 11:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ (ಪಿಟಿಐ): ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ರಾಜ್ಯ ಸಾರಿಗೆ ಬಸ್‌ವೊಂದು ಪ್ರವಾಹದಿಂದ ತುಂಬಿ ಹರಿಯುತ್ತಿದ್ದ ಸೇತುವೆಯನ್ನು ದಾಟುವಾಗ ಕೊಚ್ಚಿಹೋಗಿದ್ದು, ಒಬ್ಬರು ಮೃತಪಟ್ಟಿದ್ದಾರೆ ಹಾಗೂ ಮೂವರು ನಾಪತ್ತೆಯಾಗಿದ್ದಾರೆ.

ಮಹಾರಾಷ್ಟ್ರದ ರಾಜ್ಯ ಸಾರಿಗೆ ನಿಗಮದ (ಎಂಎಸ್‌ಆರ್‌ಟಿಸಿ) ಅರೆ ಸುವಿಹಾರಿ ಬಸ್‌ ನಾಗಪುರದಿಂದ ನಾಂದೇಡ್‌ಗೆ ಹೋಗುತ್ತಿದ್ದಾಗ ಉಮಾರ್ಖೇಡ್‌ ತೆಹಸಿಲ್‌ನ ದಹಗಾಂವ್‌ ಸೇತುವೆಯಲ್ಲಿ ಬೆಳಿಗ್ಗೆ 8ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೇತುವೆ ಮೇಲೆ ತೆರಳಿದಾಗ ನೀರಿನ ರಭಸಕ್ಕೆ ಸಿಲುಕಿದ ಬಸ್‌ ಸುಮಾರು 50 ಮೀಟರ್‌ ದೂರಕ್ಕೆ ಕೊಚ್ಚಿ ಹೋಗಿದೆ. ಬಸ್‌ನಲ್ಲಿಚಾಲಕ ಮತ್ತು ನಿರ್ವಾಹಕ ಹೊರತು‍ಪಡಿಸಿ ನಾಲ್ವರು ಪ್ರಯಾಣಿಕರಷ್ಟೇ ಇದ್ದರು, ಘಟನೆಯಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ. ನಾಪತ್ತೆಯಾದವರಲ್ಲಿ ಚಾಲಕ ಮತ್ತು ನಿರ್ವಾಹಕ ಸಹ ಸೇರಿದ್ದಾರೆ ಎಂದು ಉಮರ್ಖೇಡ್‌ ತಹಶೀಲ್ದಾರ್‌ ಆನಂದ ದೇವೋಲ್ಗಾಂವ್ಕರ್‌ ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.