ADVERTISEMENT

ಕೋವಿಡ್‌ ಸಂದರ್ಭ ಉದ್ಯೋಗ ಕಳೆದುಕೊಂಡ ಬಡವರ ಮಕ್ಕಳಿಗೆ ನಿವೃತ್ತ ಶಿಕ್ಷಕರಿಂದ ಪಾಠ

ಪಿಟಿಐ
Published 18 ಸೆಪ್ಟೆಂಬರ್ 2022, 8:26 IST
Last Updated 18 ಸೆಪ್ಟೆಂಬರ್ 2022, 8:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಔರಂಗಬಾದ್‌: ಮಹಾರಾಷ್ಟ್ರದ ಔರಂಗಬಾದ್‌ ಜಿಲ್ಲೆಯಲ್ಲಿ ಕೋವಿಡ್‌-19 ಸಂದರ್ಭ ಉದ್ಯೋಗ ಕಳೆದುಕೊಂಡ ಬಡ ಗೋಂಡ ಬುಡಕಟ್ಟು ಸಮುದಾಯದವರ ಮಕ್ಕಳಿಗೆ ನಿವೃತ್ತ ಶಿಕ್ಷಕರು ಪಾಠ ಹೇಳಿಕೊಟ್ಟಿದ್ದಾರೆ. ಓದಲು ಮತ್ತು ಬರೆಯಲು ಕಲಿಸಿಕೊಟ್ಟಿದ್ದಾರೆ.

'ಮಗುಳ್ನಗಿಸೋಣ' ಎಂಬ ಯೋಜನೆಯಡಿ ನಿವೃತ್ತ ಶಿಕ್ಷಕರ ಗುಂಪು 50ಕ್ಕೂ ಹೆಚ್ಚು ಬಡ ಮಕ್ಕಳಿಗೆ ವಿದ್ಯೆ ಕಲಿಸಿದ್ದಾರೆ. ಈ ಯೋಜನೆಯನ್ನು ವೃತ್ತಿನಿರತ ವೈದ್ಯರು ಮತ್ತು ಶಿಕ್ಷಕರು ಆರಂಭಿಸಿದ್ದಾರೆ.

ಬುಡಕಟ್ಟು ಸಮುದಾಯಕ್ಕೆ ಸೇರಿದ ಮಕ್ಕಳು ಈಗ ಓದಲು ಮತ್ತು ಬರೆಯಲು ಕಲಿತಿದ್ದಾರೆ. ಕ್ರೀಡಾ ಚಟುವಟಿಕೆಗಳಲ್ಲೂ ಭಾಗವಹಿಸುತ್ತಿದ್ದಾರೆ. ಸ್ವಚ್ಛವಾಗಿರುವುದನ್ನು ರೂಢಿಸಿಕೊಂಡಿದ್ದಾರೆ ಎಂದು ಯೋಜನೆಯ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.

ADVERTISEMENT

ಆದಿವಾಸಿ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಮುಖ್ಯ ವಾಹಿನಿಗೆ ಕರೆತರುವ ಪ್ರಯತ್ನವನ್ನು ಅಲ್ಲಿನ ಶಿಕ್ಷಣ ಇಲಾಖೆ ಶ್ಲಾಘಿಸಿದೆ. ಕೆಲವು ದಶಕಗಳಿಂದ ಔರಂಗಬಾದ್‌ನ ದೇವಗಿರಿ ಕೋಟೆಯ ಸಮೀಪ ಮಲಿವಾಡ ಪ್ರದೇಶದಲ್ಲಿ ಗೋಂಡ ಸಮುದಾಯ ನೆಲೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.