ADVERTISEMENT

ಉದ್ಧವ್‌ ಠಾಕ್ರೆ ಸೇರಿ 9 ಮಂದಿ ಪ್ರಮಾಣ ವಚನ ಸ್ವೀಕಾರ

ಪಿಟಿಐ
Published 18 ಮೇ 2020, 19:45 IST
Last Updated 18 ಮೇ 2020, 19:45 IST

ಮುಂಬೈ:ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಸೇರಿದಂತೆ 9 ಮಂದಿ ಸೋಮವಾರ‍ಪ್ರಮಾಣ ವಚನ ಸ್ವೀಕರಿಸಿದರು.

ವಿಧಾನ ಭವನದಲ್ಲಿ ನಡೆದ ಸಮಾರಂಭದಲ್ಲಿವಿಧಾನ ಪರಿಷತ್ ಸಭಾಪತಿರಾಮರಾಜೆನಿಂಬಾಳ್ಕರ್ಪ್ರಮಾಣ ವಚನವನ್ನು ಬೋಧಿಸಿದರು.

ಶಿವಸೇನೆಯಿಂದ ಉದ್ಧವ್‌ ಠಾಕ್ರೆ, ವಿಧಾನ ಪರಿಷತ್ತಿನ ಉಪ ಸಭಾಪತಿ ನೀಲಂ ಗುರ್ಹೆ, ಬಿಜೆಪಿಯಿಂದ ರಂಜಿತ್‌ಸಿಂಹ ಮೋಹಿತೆ ಪಾಟೀಲ್‌, ಗೋಪಿಚಂದ್‌ ಪಡಾಲ್ಕರ್‌, ಪ್ರವೀಣ್‌ ದಾಟ್ಕೆ ಮತ್ತು ರಮೇಶ್‌ ಕರಾಡ್‌, ಎನ್‌ಸಿಪಿಯಿಂದ ಶಶಿಕಾಂತ್‌ ಶಿಂಧೆ, ಅಮೂಲ ಮಿಟ್ಕಾರಿ ಮತ್ತು ಕಾಂಗ್ರೆಸ್‌ ನಾಯಕ ರಾಜೇಶ್‌ ರಾಠೋಡ್‌‌ ಪ್ರಮಾಣ ವಚನ ಸ್ವೀಕರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.