ಸೊಲ್ಲಾಪುರ: ಮಹಾರಾಷ್ಟ್ರದ ಸೊಲ್ಲಾಪುರ ಕ್ಷೇತ್ರದ ಬಿಜೆಪಿ ಸಂಸದ ಜೈಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಸಲ್ಲಿಸಿದ್ದ ಜಾತಿ ಪ್ರಮಾಣಪತ್ರವನ್ನು ಸೋಮವಾರ ಜಿಲ್ಲಾ ಜಾತಿ ಮಾನ್ಯತಾ ಸಮಿತಿ ಅಸಿಂಧುಗೊಳಿಸಿದ್ದು, ಸಂಸದರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದೆ.
ಸೊಲ್ಲಾಪುರ ಕ್ಷೇತ್ರವು ಪರಿಶಿಷ್ಟ ಜಾತಿ ಅಭ್ಯರ್ಥಿಗೆ ಮೀಸಲಾಗಿದೆ.
‘ಸಮಿತಿಗೆ ದೂರು ನೀಡಿದ್ದ ವಕೀಲರೊಬ್ಬರು, ಸ್ವಾಮೀಜಿ ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಳ್ಳುವ ಸಾಧ್ಯತೆ ಇದೆ’ ಎಂದಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ನ ಸುಶೀಲ್ಕುಮಾರ್ ಶಿಂಧೆ ಅವರನ್ನು ಸ್ವಾಮೀಜಿ 1.5 ಲಕ್ಷ ಮತಗಳಿಂದ ಸೋಲಿಸಿದ್ದರು.
ಪರಿಶಿಷ್ಟ ಜಾತಿಗೆ ಸೇರುವ ‘ಬೇಡ ಜಂಗಮ’ ಸಮುದಾಯದವರೆಂದು ಸ್ವಾಮೀಜಿ ಚುನಾವಣಾ ಅಫಿಡವಿಟ್
ನಲ್ಲಿ ನಮೂದಿಸಿದ್ದಾರೆ. ಆದರೆ, ಸ್ವಾಮೀಜಿ ‘ಹಿಂದೂ ಲಿಂಗಾಯತ’ ಸಮುದಾಯಕ್ಕೆ ಸೇರಿದವರೆಂದು ಪ್ರಮೋದ್ ಗಾಯಕ್ ವಾಡ್ ದೂರಿದ್ದು, ತನಿಖೆ ನಡೆಸಲು ಕೋರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.