ADVERTISEMENT

ಪಶ್ಚಿಮ ಬಂಗಾಳ |ಎಸ್‌ಐಆರ್‌: ಟಿಎಂಸಿ ವಿರೋಧ

ಪಟ್ಟಿಯಲ್ಲಿ ಮತದಾರರ ಗುರುತಿನ ಪತ್ರ(ಎಪಿಕ್) ಸೇರಿಸಲು ಕೋರಿಕೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 14:25 IST
Last Updated 9 ಸೆಪ್ಟೆಂಬರ್ 2025, 14:25 IST
ಮಮತಾ ಬ್ಯಾನರ್ಜಿ –ಪಿಟಿಐ ಚಿತ್ರ
ಮಮತಾ ಬ್ಯಾನರ್ಜಿ –ಪಿಟಿಐ ಚಿತ್ರ   

ಕೋಲ್ಕತ್ತ: ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌)ಯನ್ನು ಎರಡರಿಂದ ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಆಧಾರ್‌ ಕಾರ್ಡ್‌ ಹಾಗೂ ಮತದಾರರ ಗುರುತಿನ ಪತ್ರ(ಎಪಿಕ್) ಸೇರಿಸಬೇಕು ಎಂದು ಕೋರಿಕೆ ಸಲ್ಲಿಸಿದ್ದಾರೆ.

‘ನಾವು ಎಸ್‌ಐಆರ್‌ ಅನ್ನು ವಿರೋಧಿಸುತ್ತೇವೆ. ‘ಇಂಡಿಯಾ’ ಒಕ್ಕೂಟದ ನಿಲುವನ್ನು ನಮ್ಮ ಪಕ್ಷವು ಬೆಂಬಲಿಸುತ್ತದೆ. ಎರಡರಿಂದ ಮೂರು ತಿಂಗಳಲ್ಲಿ ಎಸ್‌ಐಆರ್‌ ನಡೆಸಲು ಸಾಧ್ಯವಿಲ್ಲ’ ಎಂದು ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ತಿಳಿಸಿದ್ದಾರೆ.

‘ಮತದಾರನ ಗುರುತಿನ ಪತ್ರವನ್ನು ಮತದಾರರ ಗುರುತಿನ ಚೀಟಿಯಾಗಿ ಪರಿಗಣಿಸಬೇಕು. ಎಲ್ಲರ ಬಳಿಯೂ ಆಧಾರ್‌ ಕಾರ್ಡ್ ಇರುವ ಕಾರಣ, ಅದನ್ನು ಪರಿಗಣಿಸಬೇಕು. ‘ಎಪಿಕ್‌’ ಅನ್ನು ಸೇರ್ಪಡೆಗೊಳಿಸಬೇಕು’ ಎಂದು ತಿಳಿಸಿದರು.

ADVERTISEMENT

ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅಲ್ಲಿಯೂ ಚುನಾವಣಾ ಆಯೋಗವು ಎಸ್ಐಆರ್‌ ಪ್ರಕ್ರಿಯೆ ನಡೆಸುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.