ಜೋಧಪುರ: 38 ವರ್ಷದ ವ್ಯಕ್ತಿಯೊಬ್ಬ ತನ್ನ ಕುಟುಂಬದ ನಾಲ್ವರನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಜೋಧಪುರದಲ್ಲಿ ಶುಕ್ರವಾರ ನಡೆದಿದೆ.
ಶಂಕರ್ ಲಾಲ್ ಎಂಬಾತ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತನ್ನತಂದೆ ಸೋನರಾಮ್ (65) ಅವರನ್ನು ಕೊಡಲಿಯಿಂದ ಕೊಂದು ಹಾಕಿದರೆ, ಬಳಿಕ ತಾಯಿ ಚಂಪಾ (55) ಮಕ್ಕಳಾದ ಲಕ್ಷ್ಮಣ (14) ಮತ್ತು ದಿನೇಶ್ (4) ಅವರನ್ನು ಕೊಲೆ ಮಾಡಿ ಬಳಿಕ ಸಂಬಂಧಿಕರ ಮನೆಯ ನೀರಿನ ತೊಟ್ಟಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಂಜಾ ವ್ಯಸನಿಯಾಗಿದ್ದ ಶಂಕರ್ ಲಾಲ್,ತಾನು ಕೊಂದು ಹಾಕಿದವರ ದೇಹಗಳನ್ನು ತನ್ನ ಮನೆಯ ನೀರಿನ ತೊಟ್ಟಿಗೆ ಹಾಕಿದ್ದ ಎಂದು ಠಾಣಾಧಿಕಾರಿ ಬದ್ರಿಪ್ರಸಾದ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.