ADVERTISEMENT

ಮೋದಿ ವಿಷ್ಣುವಿನ 11ನೇ ಅವತಾರ: ಅವಧೂತ್‌ ವಾಘ್‌

ಪಿಟಿಐ
Published 12 ಅಕ್ಟೋಬರ್ 2018, 18:10 IST
Last Updated 12 ಅಕ್ಟೋಬರ್ 2018, 18:10 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಮುಂಬೈ: ‘ಪ್ರಧಾನಿ ನರೇಂದ್ರ ಮೋದಿ ವಿಷ್ಣುವಿನ 11ನೇ ಅವತಾರ’ ಎಂದು ಮಹಾರಾಷ್ಟ್ರದ ಬಿಜೆಪಿ ವಕ್ತಾರ ಅವಧೂತ್‌ ವಾಘ್‌ ಬಣ್ಣಿಸಿದ್ದಾರೆ.

‘ದೇಶಕ್ಕೆ ದೇವರಂತಹ ವ್ಯಕ್ತಿತ್ವವುಳ್ಳ ನರೇಂದ್ರ ಮೋದಿ ಅವರು ದೊರೆತಿರುವುದು ಅದೃಷ್ಟ’ ಎಂದು ಅವರು ಹೇಳಿದ್ದಾರೆ.

ಅವಧೂತ್‌ ಮಾಡಿರುವ ಟ್ವೀಟ್‌ಗೆ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಕಟುವಾಗಿ ಟೀಕಿಸಿದ್ದು, ಇದು ದೇವರಿಗೆ ಮಾಡಿದ ಅವಮಾನ ಎಂದು ತಿಳಿಸಿದೆ.

ADVERTISEMENT

‘ವಾಘ್‌ ಅವರು ಎಂಜಿನಿಯರಿಂಗ್‌ ಪದವೀಧರರು. ಆದರೆ, ಈಗ ಅವರ ಪದವಿಯ ಪ್ರಮಾಣಪತ್ರಗಳ ನೈಜತೆಯನ್ನು ಪರಿಶೀಲಿಸುವುದು ಅಗತ್ಯ
ವಿದೆ. ಇಂತಹ ಹೇಳಿಕೆಯನ್ನು ಅವರಿಂದ ನಿರೀಕ್ಷಿಸಿರಲಿಲ್ಲ’ ಎಂದು ಎನ್‌ಸಿಪಿ ಶಾಸಕ ಜಿತೇಂದ್ರ ಅವ್ಹಾದ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.