ADVERTISEMENT

ದಿಗ್ವಿಜಯ ಸಿಂಗ್‌ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2023, 16:07 IST
Last Updated 30 ಆಗಸ್ಟ್ 2023, 16:07 IST
ದಿಗ್ವಿಜಯ ಸಿಂಗ್‌
ದಿಗ್ವಿಜಯ ಸಿಂಗ್‌   

ದಾಮೋಹ್ (ಪಿಟಿಐ): ಇಲ್ಲಿನ ಜೈನ ಮಂದಿರದ ಬಗ್ಗೆ ‘ಎಕ್ಸ್‌’ (ಟ್ವಿಟರ್‌) ವೇದಿಕೆಯಲ್ಲಿ ದಾರಿತಪ್ಪಿಸುವ ಪೋಸ್ಟ್‌ ಹಾಕಿರುವ ಆರೋಪದಲ್ಲಿ ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ವಿರುದ್ಧ ಮಧ್ಯಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜನರನ್ನು ದಾರಿತಪ್ಪಿಸುವ ಪೋಸ್ಟ್ ಹಾಕಿರುವ ದಿಗ್ವಿಜಯ್ ಅವರ ‘ಎಕ್ಸ್‌’ ಖಾತೆಯನ್ನು ಅಮಾನತು ಮಾಡಬೇಕೆಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ವಿ.ಡಿ. ಶರ್ಮಾ ಅವರು ಒತ್ತಾಯಿಸಿದ್ದಾರೆ.

‘ಕುಂಡಲ್‌ಪುರದ ಜೈನ ಮಂದಿರವನ್ನು ಬಜರಂಗ ದಳದವರು ಧ್ವಂಸ ಮಾಡಿದ್ದಾರೆ’ ಎಂದು ಆರೋಪಿಸಿ ದಿಗ್ವಿಜಯ್‌ ಅವರು ಆಗಸ್ಟ್‌ 27 ರಂದು ‘ಎಕ್ಸ್‌’ ವೇದಿಕೆಯಲ್ಲಿ ಪೋಸ್ಟ್ ಹಾಕಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.