ADVERTISEMENT

ಮುಂಗಾರು ಅಧಿವೇಶನ: 25 ಸಂಸದರಿಗೆ ಕೋವಿಡ್ ದೃಢ

ಏಜೆನ್ಸೀಸ್
Published 14 ಸೆಪ್ಟೆಂಬರ್ 2020, 14:42 IST
Last Updated 14 ಸೆಪ್ಟೆಂಬರ್ 2020, 14:42 IST
ಮುಂಗಾರು ಅಧಿವೇಶನ
ಮುಂಗಾರು ಅಧಿವೇಶನ   

ನವದೆಹಲಿ:ಮುಂಗಾರು ಅಧಿವೇಶನದ ಸೋಮವಾರ ಆರಂಭವಾಗಿದ್ದು 25ಸಂಸದರಿಗೆ ಕೋವಿಡ್-19 ದೃಢಪಟ್ಟಿರುವುದಾಗಿಸಂಸತ್ತಿನ ಅಧಿಕಾರಿಗಳು ಹೇಳಿದ್ದಾರೆ.

ಮೀನಾಕ್ಷಿ ಲೇಖಿ, ಅನಂತ ಕುಮಾರ್ ಹೆಗಡೆ ಮತ್ತು ಪರ್ವೇಶ್ ಸಾಹೀಬ್ ಸಿಂಗ್ ಸೇರಿದಂತೆ 17 ಸಂಸದರಿಗೆ ಕೋವಿಡ್ ದೃಢಪಟ್ಟಿದೆ. ಸೋಂಕಿತರಲ್ಲಿ 12 ಬಿಜೆಪಿ ಸಂಸದರು, ವೈಎಸ್‌ಆರ್ ಕಾಂಗ್ರೆಸ್‌ನ ಇಬ್ಬರು, ಶಿವಸೇನಾ, ಡಿಎಂಕೆ ಮತ್ತು ಆರ್‌ಎಲ್‌ಪಿ ಪಕ್ಷದಲ್ಲಿನ ಒಬ್ಬ ಸಂಸದನಿಗೆ ಕೋವಿಡ್ ಸೋಂಕು ತಗುಲಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿತ್ತು

541 ಸದಸ್ಯರಿರುವ ಲೋಕಸಭೆಯಲ್ಲಿ 359 ಮಂದಿ ಹಾಜರಾಗಿದ್ದಾರೆ. ಎಲ್ಲರೂ ಮಾಸ್ಕ್ ಧರಿಸಿಯೇ ಹಾಜರಾಗಿದ್ದು ಕೋವಿಡ್ ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದ್ದರು.

ರಾಜ್ಯಸಭೆಯಲ್ಲಿ 8 ಸದಸ್ಯರಿಗೆ ಕೋವಿಡ್ ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.