ADVERTISEMENT

ನೂತನ ಸಂಸತ್ ಭವನ: ಪ್ರಧಾನಿ ವ್ಯಾಖ್ಯಾನಕ್ಕೆ ಕಪಿಲ್‌ ಸಿಬಲ್ ಟೀಕೆ

ಪಿಟಿಐ
Published 29 ಮೇ 2023, 16:36 IST
Last Updated 29 ಮೇ 2023, 16:36 IST
ಕಪಿಲ್ ಸಿಬಲ್  (ಕೃಪೆ: ಪಿಟಿಐ)
ಕಪಿಲ್ ಸಿಬಲ್ (ಕೃಪೆ: ಪಿಟಿಐ)   

ನವದೆಹಲಿ: ‘ನನ್ನ ನವ ಭಾರತವು ಕೇಸರಿಯಲ್ಲ, ಛಿದ್ರವಾದುದಲ್ಲ, ಅಸಹಿಷ್ಣುವೂ ಅಲ್ಲ’ ಎಂದು ರಾಜ್ಯಸಭೆ ಸದಸ್ಯ ಕಪಿಲ್‌ ಸಿಬಲ್ ಸೋಮವಾರ ಪ್ರತಿಕ್ರಿಯಿಸಿದ್ದಾರೆ.

‘ನೂತನ ಸಂಸತ್ ಭವನ ದೇಶದ ಪ್ರಗತಿಯಲ್ಲಿ ಅಮರವಾದ ಸ್ಮಾರಕವಾಗಿದೆ’ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಟ್ವೀಟ್ ಮಾಡಿದ್ದಾರೆ.

‘ನನ್ನ ನವ ಭಾರತವು 140 ಕೋಟಿ ಭಾರತೀಯರ ಮಹತ್ವಾಕಾಂಕ್ಷೆಯ ಆಶಯಗಳನ್ನು ಆಧರಿಸಿದ್ದಾಗಿದೆ. ಅದು, ಇಟ್ಟಿಗೆ ಮತ್ತು ಗಾರೆಯನ್ನು ಆಧರಿಸಿದ್ದಲ್ಲ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.