ನವದೆಹಲಿ: ಲಾಕ್ಡೌನ್ ಮತ್ತು ನೋಟು ರದ್ದತಿಯಿಂದಾಗಿ ಮೋದಿ ಸರ್ಕಾರ ಅಸಂಖ್ಯಾತಮನೆಗಳನ್ನುನಾಶ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಲಾಕ್ಡೌನ್ನಿಂದಾಗಿ ಆರ್ಥಿಕ ಸಂಕಷ್ಟಕ್ಕೊಳಗಾದ ಕುಟುಂಬವೊಂದರ ಯುವತಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ಟ್ಯಾಗ್ ಮಾಡಿ ರಾಹುಲ್ ಈ ರೀತಿ ಟ್ವೀಟಿಸಿದ್ದಾರೆ.
ಆ ಯುವತಿಯ ಸಾವಿಗೆಸಂತಾಪಗಳು, ಸರ್ಕಾರ ಉದ್ದೇಶಪೂರ್ವಕ ಮಾಡಿದ ನೋಟು ರದ್ದತಿ ಮತ್ತು ದೇಶವ್ಯಾಪಿ ಲಾಕ್ಡೌನ್ನಿಂದಾಗಿ ಹಲವಾರು ಮನೆಗಳು ನಿರ್ನಾಮವಾಗಿವೆ. ಇದೇ ಸತ್ಯ ಎಂದಿದ್ದಾರೆ ರಾಹುಲ್.
ದೆಹಲಿಯ ಲೇಡಿ ಶ್ರೀರಾಮ್ ಮಹಿಳಾ ಕಾಲೇಜಿನ (ಎಲ್ಎಸ್ಆರ್) 2ನೇ ವರ್ಷ ಪದವಿ ವಿದ್ಯಾರ್ಥಿನಿ ಐಶ್ವರ್ಯಾ ತನ್ನ ಹುಟ್ಟೂರು ತೆಲಂಗಾಣದಲ್ಲಿ ನವೆಂಬರ್ 2ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮನೆಯಲ್ಲಿ ಆರ್ಥಿಕ ತೊಂದರೆ ಇದ್ದ ಕಾರಣ ಶಿಕ್ಷಣ ಮುಂದುವರಿಸುವ ಬಗ್ಗೆ ಆಕೆಗೆ ಆತಂಕವಿತ್ತು ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.