ADVERTISEMENT

ನಮ್ಮ ಮೊದಲ ನಿರ್ಧಾರ ದೇಶ ರಕ್ಷಣೆ ಮಾಡುವವರಿಗೆ ಅರ್ಪಣೆ: ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 31 ಮೇ 2019, 13:23 IST
Last Updated 31 ಮೇ 2019, 13:23 IST
   

ನವದೆಹಲಿ: ನಕ್ಸಲ್ ಮತ್ತು ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಮತ್ತು ರಾಜ್ಯ ಪೊಲೀಸರ ಮಕ್ಕಳಿಗಾಗಿರುವ ಸ್ಕಾಲರ್‌ಶಿಪ್ ಯೋಜನೆಯನ್ನುಮುಂದುವರಿಸಲು ನರೇಂದ್ರ ಮೋದಿ ಸರ್ಕಾರ ತೀರ್ಮಾನಿಸಿದೆ.ಈ ಯೋಜನೆಯಲ್ಲಿ ಪ್ರತಿ ತಿಂಗಳು ವಿದ್ಯಾರ್ಥಿಗಳಿಗೆ ₹2,000- ₹2,500 ಮತ್ತು ವಿದ್ಯಾರ್ಥಿನಿಯರಿಗೆ ₹2,250-₹3000 ಸ್ಕಾಲರ್‌ಶಿಪ್ ಲಭಿಸಲಿದೆ.

ನಮ್ಮ ಸರ್ಕಾರದ ಮೊದಲ ನಿರ್ಧಾರ ನಮ್ಮ ದೇಶವನ್ನು ರಕ್ಷಿಸುವವರಿಗಾಗಿ ಅರ್ಪಣೆ ಮಾಡಿದ್ದೇವೆ.ಉಗ್ರರ ಅಥವಾ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಪೊಲೀಸರ ಮಕ್ಕಳಿಗಿರುವ, ರಾಷ್ಟ್ರೀಯ ಭದ್ರತಾ ನಿಧಿಯಡಿಯಲ್ಲಿ ಬರುವ ಪ್ರಧಾನ ಮುಂತ್ರಿ ಸ್ಕಾಲರ್‌ಶಿಪ್ ಯೋಜನೆಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ ಎಂದು ಮೋದಿ ಟ್ವೀಟಿಸಿದ್ದಾರೆ.

ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.