ADVERTISEMENT

ಸಾಗರ ಗಡಿಯಲ್ಲಿ ಯಾವುದೇ ಬೆದರಿಕೆ ಎದುರಿಸಲು ನೌಕಾಪಡೆ ಸನ್ನದ್ಧ - ಕರಂವೀರ್‌ ಸಿಂಗ್

ಪಿಟಿಐ
Published 3 ಡಿಸೆಂಬರ್ 2020, 10:36 IST
Last Updated 3 ಡಿಸೆಂಬರ್ 2020, 10:36 IST
ಅಡ್ಮಿರಲ್‌ ಕರಂವೀರ್‌ ಸಿಂಗ್‌
ಅಡ್ಮಿರಲ್‌ ಕರಂವೀರ್‌ ಸಿಂಗ್‌   

ನವದೆಹಲಿ: ಸಾಗರ ಗಡಿಯಲ್ಲಿ ಚೀನಾ ಸೇರಿದಂತೆ ಯಾವುದೇ ದೇಶದಿಂದ ಎದುರಾಗುವ ಬೆದರಿಕೆಯನ್ನು ಎದುರಿಸಲು ನೌಕಾಪಡೆ ಸದಾ ಸನ್ನದ್ಧವಾಗಿದೆ ಎಂದು ಪಡೆಯ ಮುಖ್ಯಸ್ಥ ಅಡ್ಮಿರಲ್‌ ಕರಂವೀರ್‌ ಸಿಂಗ್‌ ಗುರುವಾರ ಹೇಳಿದರು.

ನೌಕಾಪಡೆ ದಿನದ ಅಂಗವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೂ ಮಹಾಸಾಗರದಲ್ಲಿ ಯಾವುದೇ ದೇಶದಿಂದ ಅತಿಕ್ರಮಣ ಕಂಡು ಬಂದಲ್ಲಿ ಅದನ್ನು ನಿಭಾಯಿಸಲು ನೌಕಾಪಡೆ ಪ್ರಮಾಣಿತ ಕಾರ್ಯಾಚರಣೆ ವಿಧಾನ ಹೊಂದಿದೆ’ ಎಂದು ಪರೋಕ್ಷವಾಗಿ ಚೀನಾಕ್ಕೆ ತಿರುಗೇಟು ನೀಡಿದರು.

ಪೂರ್ವ ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ನಿರ್ಮಾಣವಾಗಿರುವ ಸಂಘರ್ಷ ಸ್ಥಿತಿಯನ್ನು ಪ್ರಸ್ತಾಪಿಸಿದ ಅವರು, ‘ಕಣ್ಗಾವಲಿಗಾಗಿ ಗಡಿಯಲ್ಲಿ ನೌಕಾಪಡೆಯ ಪಿ–81 ಯುದ್ಧವಿಮಾನ ಹಾಗೂ ಹೆರಾನ್‌ ಡ್ರೋನ್‌ಗಳನ್ನು ನಿಯೋಜಿಸಲಾಗಿದೆ’ ಎಂದರು.

ADVERTISEMENT

ಸಾಗರದೊಳಗೆ ಕಾರ್ಯಾಚರಣೆ ಕೈಗೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವತ್ತಲೂ ಒತ್ತು ನೀಡಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.