ADVERTISEMENT

ಸಿಆರ್‌ಪಿಎಫ್‌ ಯೋಧ ಹತ್ಯೆ

ಪಿಟಿಐ
Published 18 ಮಾರ್ಚ್ 2019, 18:38 IST
Last Updated 18 ಮಾರ್ಚ್ 2019, 18:38 IST

ರಾಯಪುರ/ನವದೆಹಲಿ:ಛತ್ತೀಸಗಡದ ದಾಂತೇವಾಡ ಜಿಲ್ಲೆಯಲ್ಲಿ ಸೋಮವಾರ ನಕ್ಸಲರು ನಡೆಸಿದ ದಾಳಿಯಲ್ಲಿ ಸಿಆರ್‌ಪಿಎಫ್‌ ಯೋಧರೊಬ್ಬರು ಸಾವನ್ನಪ್ಪಿದ್ದಾರೆ. ಐವರು ಯೋಧರು ಗಾಯಗೊಂಡಿದ್ದಾರೆ.

ಕೊಂಡಪಾರಾ ಮತ್ತು ಕಮಪಾಪುರ ಗ್ರಾಮಗಳ ನಡುವಿನ ಅರಣ್ಯಪ್ರದೇಶದಲ್ಲಿ ಸಿಆರ್‌ಪಿಎಫ್‌ನ 231ನೇ ಬೆಟಾಲಿಯನ್‌ ಯೋಧರು ವಾಹನದಲ್ಲಿ ತೆರಳುತ್ತಿದ್ದಾಗಸುಧಾರಿತ ಸ್ಫೋಟಕಗಳನ್ನು ಬಳಸಿ ನಕ್ಸಲರು ದಾಳಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT