ADVERTISEMENT

ಕಾಶ್ಮೀರ: ಶೃಂಗೇರಿ ಮಠ ನೆರವಿನಿಂದ ನೂತನ ಶಾರದಾ ದೇವಸ್ಥಾನ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 14:38 IST
Last Updated 6 ಫೆಬ್ರುವರಿ 2022, 14:38 IST
ಉದ್ದೇಶಿತ ಶಾರದಾ ದೇವಸ್ಥಾನದ ಚಿತ್ರ –ಪಿಟಿಐ ಚಿತ್ರ
ಉದ್ದೇಶಿತ ಶಾರದಾ ದೇವಸ್ಥಾನದ ಚಿತ್ರ –ಪಿಟಿಐ ಚಿತ್ರ   

ಶ್ರೀನಗರ: ಕಾಶ್ಮೀರದ ಉತ್ತರದಲ್ಲಿರುವ ಕುಪ್ವಾರ ಜಿಲ್ಲೆಯ ತೀತ್ವಾಲ್ ಗ್ರಾಮದಲ್ಲಿ ಕರ್ನಾಟಕದ ಶೃಂಗೇರಿಯಲ್ಲಿರುವ ಶಂಕರಾಚಾರ್ಯ ಮಠವು ದೇವಿ ಶಾರದೆಯ ನೂತನ ದೇವಾಲಯ ನಿರ್ಮಿಸಲು ಮುಂದಾಗಿದೆ.

ಗ್ರಾಮದ ಬಳಿಯ ಕಿಶನ್‌ಗಂಗಾ ನದಿ ತೀರದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗುತ್ತದೆ.

ಮಠವು ನೀಡುವ ಪಂಚಲೋಹದಿಂದ ಮಾಡಿದ ದೇವಿ ಶಾರದೆಯ ವಿಗ್ರಹವನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಮಠದ ಸಿಇಒ ವಿ.ಆರ್‌.ಗೌರಿಶಂಕರ್ ತಿಳಿಸಿದ್ದಾರೆ.

ADVERTISEMENT

6ನೇ ಶತಮಾನದಲ್ಲಿ ಸ್ಥಾಪಿಸಲಾದ ಶಾರದಾ ದೇವಸ್ಥಾನವನ್ನು ಸರ್ವಜ್ಞ ಪೀಠ ಎಂದೂ ಕರೆಯಲಾಗುತ್ತದೆ. ಸದ್ಯ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ (ಪಿಒಕೆ) ಈ ದೇವಸ್ಥಾನವನ್ನು ಹಾಳುಗೆಡವಲಾಗಿದೆ. ಇದೇ ಮಾದರಿಯಲ್ಲಿ ನೂತನ ದೇವಸ್ಥಾನವನ್ನು ನಿರ್ಮಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.