ನವದೆಹಲಿ: ನಿಮಿಷ ಪ್ರಿಯಾ ಅವರಿಗೆ ಮರಣದಂಡಣೆ ವಿಧಿಸಲಾಗಿರುವ ಪ್ರಕರಣದ ಕುರಿತು ಕೇರಳದ ಪಾದ್ರಿಯೊಬ್ಬರು ನೀಡುತ್ತಿರುವ ಮಾಹಿತಿಯು ಸುಳ್ಳು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಯೆಮನ್ನಲ್ಲಿ ನಿಮಿಷ ಪ್ರಿಯಾ ಅವರ ಮರಣದಂಡನೆಯು ರದ್ದಾಗಿದೆ ಎಂದು ಕಾಂತಾಪುರಂನ ಎ.ಪಿ. ಅಬೂಬಕರ್ ಮುಸ್ಲಿಯಾರ್ ಸೋಮವಾರ ಹೇಳಿದ್ದರು. ಇಂತಹ ಸೂಕ್ಷ್ಮ ಪ್ರಕರಣದಲ್ಲಿ ಯಾರೂ ವದಂತಿಗಳನ್ನು ಹಬ್ಬಿಸಬಾರದು ಎಂದು ಸರ್ಕಾರದ ಮೂಲಗಳು ಎಚ್ಚರಿಕೆ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.