ನವದೆಹಲಿ: ಬಹುಕೋಟಿ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರಿಗೆ ಸಹಾಯ ಮಾಡಿದ ಆರೋಪ ಎದುರಿಸುತ್ತಿರುವ ಪಂಜಾಬ್ ನ್ಯಾಷನಲ್ ಬ್ಯಾಂಕಿನ ನಿವೃತ್ತ ಉಪ ವ್ಯವಸ್ಥಾಪಕ ಗೋಕುಲ್ನಾಥ್ ಶೆಟ್ಟಿ ವಿರುದ್ಧ ಸಿಬಿಐ ಹೊಸದಾಗಿ ಆರೋಪ ಪಟ್ಟಿ ಸಲ್ಲಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕುಲ್ನಾಥ್ ಶೆಟ್ಟಿ ಮತ್ತು ಪತ್ನಿ ಆಶಾಲತಾ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆಶಾ ಲತಾ, ಇಂಡಿಯನ್ ಬ್ಯಾಂಕ್ನಲ್ಲಿ ಗುಮಾಸ್ತೆಯಾಗಿದ್ದು, ಈ ಬ್ಯಾಂಕ್ ವಂಚನೆ ಪ್ರಕಣ ನಡೆದ 2011–17ರ ಅವಧಿಯಲ್ಲಿ ಅಕ್ರಮವಾಗಿ ₹4.28 ಕೋಟಿ ಮೌಲ್ಯದ ಆಸ್ತಿಯನ್ನು ಸಂಪಾದನೆ ಮಾಡಿದ್ದರು.
ಒಟ್ಟು ಆಸ್ತಿಯಲ್ಲಿ ₹ 2.63 ಕೋಟಿಗೆ ಮೌಲ್ಯದ ಆಸ್ತಿಗೆ ತೃಪ್ತಿದಾಯಕ ವಿವರಣೆ ನೀಡಲಿಲ್ಲ ಎಂದು ಸಿಬಿಐ ಆರೋಪಿಸಿದೆ. ಇದು ಅವರು ನೀಡಿರುವ ಆದಾಯದ ಮೂಲಗಳಿಗಿಂತ ಎರಡೂವರೆ ಪಟ್ಟು ಹೆಚ್ಚಾಗಿದೆ ಎಂದು ಹೇಳಿದೆ.
ಶೆಟ್ಟಿ ಮತ್ತು ಮೋದಿ, ಚೋಕ್ಸಿ ನಡುವಿನ ಸಂಬಂಧದ ಬಗ್ಗೆಯೂ ಸಿಬಿಐಗಮನ ಹರಿಸಿದ್ದು, ಈ ಅವಧಿಯಲ್ಲಿ ಉಪ ವ್ಯವಸ್ಥಾಪಕರು ಎಷ್ಟು ಆಸ್ತಿ ಸಂಗ್ರಹಿಸಿದ್ದಾರೆಂದು ಗಮನಿಸಲಾಗಿದೆ ಎಂದು ಸಿಬಿಐ ಹೇಳಿದೆ.
ಶೆಟ್ಟಿ ಮತ್ತು ಅವರ ಪತ್ನಿ ಆಸ್ತಿಯನ್ನು ಪರಿಶೀಲಿಸಲು ಸಿಬಿಐ ಸಂಸ್ಥೆ 2018ರ ನವೆಂಬರ್ನಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.