ADVERTISEMENT

ಎನ್‌ಜೆಎಸಿ ರದ್ದಾದ ದಿನ ಸಂಸತ್ತಿನಲ್ಲಿ ‘ಸದ್ದೇ ಕೇಳಲಿಲ್ಲ’: ಧನಕರ್‌

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 14:24 IST
Last Updated 3 ಡಿಸೆಂಬರ್ 2022, 14:24 IST
ಜಗದೀಪ್‌ ಧನಕರ್‌
ಜಗದೀಪ್‌ ಧನಕರ್‌   

ನವದೆಹಲಿ(ಪಿಟಿಐ): ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆಯನ್ನು(ಎನ್‌ಜೆಎಸಿ) ಸುಪ್ರಿಂ ಕೋರ್ಟ್‌ ರದ್ದುಗೊಳಿಸಿದ ಬಳಿಕ ಲೋಕಸಭೆಯಲ್ಲಿ ‘ಸದ್ದೇ ಕೇಳಲಿಲ್ಲ’ ಎಂದು ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ಶುಕ್ರವಾರ ಹೇಳಿದರು.

ಎಲ್‌.ಎಂ ಸಂಘ್ವಿ ಸ್ಮರಣಾರ್ಥ ಉಪನ್ಯಾಸದಲ್ಲಿ ಭಾಗವಹಿಸಿದ್ದ ಧನಕರ್‌ ಅವರು, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರ ಸಮ್ಮುಖದಲ್ಲಿ ಈ ಹೇಳಿಕೆ ನೀಡಿದರು.

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆಯ ರದ್ದತಿಯನ್ನು ಗಂಭೀರ ವಿಚಾರ ಎಂದು ಕರೆದ ಅವರು, ಸಂಸತ್ತಿನಲ್ಲಿ ಜಾರಿಯಾಗುವ ಕಾನೂನುಗಳು ಜನರ ಇಚ್ಛೆಯನ್ನು ಪ್ರತಿಬಿಂಬಿಸುತ್ತವೆ. ಜನರ ಇಚ್ಛೆಯನ್ನು ಸುಪ್ರೀಂ ಕೋರ್ಟ್‌ ಅಲ್ಲಗಳೆದಿದೆ. ಈ ರೀತಿಯ ಮತ್ತೊಂದು ನಿದರ್ಶನ ಪ್ರಪಂಚದಲ್ಲಿ ಇನ್ನೊಂದಿಲ್ಲ ಎಂದು ಹೇಳಿದರು.

ADVERTISEMENT

ಎನ್‌ಜೆಎಸಿ ರದ್ದುಗೊಳಿಸಿ ಸುಪ್ರಿಂ ಕೋರ್ಟ್‌ 2015ರಲ್ಲಿ ಆದೇಶ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.