ADVERTISEMENT

‘ರಾಮ ಜನ್ಮಭೂಮಿ’ ಸಿನಿಮಾ ಬಿಡುಗಡೆಗೆ ವಿರೋಧ

ಪಿಟಿಐ
Published 24 ನವೆಂಬರ್ 2018, 20:13 IST
Last Updated 24 ನವೆಂಬರ್ 2018, 20:13 IST
ಅಯೋಧ್ಯೆ ( ಚಿತ್ರಕೃಪೆ: ವಿಕಿಪೀಡಿಯಾ)
ಅಯೋಧ್ಯೆ ( ಚಿತ್ರಕೃಪೆ: ವಿಕಿಪೀಡಿಯಾ)   

ಔರಂಗಾಬಾದ್‌: ಅಯೋಧ್ಯೆ ವಿವಾದದ ನೈಜ ಘಟನಾವಳಿಗಳನ್ನು ಇಟ್ಟುಕೊಂಡು ನಿರ್ಮಿಸಲಾಗಿರುವ ಹಿಂದಿ ಚಲನಚಿತ್ರವನ್ನು ಬಿಡುಗಡೆ ಮಾಡಲು ಅನುಮತಿ ನೀಡಬಾರದು ಎಂದುಮಹಾರಾಷ್ಟ್ರ ಮುಸ್ಲಿಂ ಅವಾಮಿ ಸಮಿತಿ (ಎಂಎಂಸಿಎ) ಸೆನ್ಸಾರ್‌ ಮಂಡಳಿಯನ್ನು ಒತ್ತಾಯಿಸಿದೆ.

‘ರಾಮ ಜನ್ಮಭೂಮಿ’ ಚಿತ್ರವನ್ನು ಶಿಯಾ ವಕ್ಫ್‌ ಮಂಡಳಿ ಅಧ್ಯಕ್ಷ ಸಯ್ಯದ್‌ ವಾಸಿಂ ರಿಜ್ವಿ ಚಿತ್ರಕಥೆ ಬರೆದು, ನಿರ್ಮಿಸಿದ್ದಾರೆ. ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ರಾಮಮಂದಿರ ನಿರ್ಮಾಣಕ್ಕಾಗಿ 1990ರ ಅಕ್ಟೋಬರ್‌ 30 ರಿಂದ ನಡೆದ ಚಳವಳಿಗಳ ಸಂದರ್ಭದಲ್ಲಿ ನಡೆದ ನೈಜ ಘಟನೆಗಳನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿದೆ.

ಎಂಎಂಸಿಎ ಅಧ್ಯಕ್ಷ ಇಲಿಯಾಸ್‌ ಕಿರ್ಮಾನಿ ಅವರು, ಈ ಚಲನಚಿತ್ರವು ಸಮಾಜದಲ್ಲಿ ದ್ವೇಷವನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದ್ದಾರೆ.

ADVERTISEMENT

ಡಿಸೆಂಬರ್‌ ಅಂತ್ಯದೊಳಗೆ ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕ ಸನೋಜ್‌ ಮಿಶ್ರಾ ಹೇಳಿದ್ದಾರೆ.

ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಭಾನುವಾರ ಅಯೋಧ್ಯೆಯಲ್ಲಿ ನಡೆಯುತ್ತಿರುವ ಧರ್ಮಸಭೆ ಹಿನ್ನೆಲೆಯಲ್ಲಿ ಭದ್ರತೆಗೆ ಸೇನೆ ನಿಯೋಜಿಸುವಂತೆ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್‌ ಯಾದವ್‌ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಉತ್ತರ ಪ್ರದೇಶದ ಪರಿಸ್ಥಿತಿಯ್ನು ಸುಪ್ರೀಂ ಕೋರ್ಟ್‌ ಗಮನಿಸಬೇಕು.ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ಯಾವುದೇ ಮಟ್ಟಕ್ಕಾದರೂ ಹೋಗಬಹುದು. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೇನೆ ನಿಯೋಜಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.