ADVERTISEMENT

ಶಶಿಕಲಾ ಭೇಟಿ ಮಾಡಿದ ಪನ್ವೀರ್‌ಸೆಲ್ವಂ ಸಹೋದರ ಎಐಎಡಿಎಂಕೆ ಪಕ್ಷದಿಂದ ಉಚ್ಚಾಟನೆ

ಪಿಟಿಐ
Published 5 ಮಾರ್ಚ್ 2022, 13:03 IST
Last Updated 5 ಮಾರ್ಚ್ 2022, 13:03 IST
 ಪನ್ನೀರ್‌ಸೆಲ್ವಂ
 ಪನ್ನೀರ್‌ಸೆಲ್ವಂ   

ಚೆನ್ನೈ (ಪಿಟಿಐ): ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ.ಜಯಲಲಿತಾ ಅವರ ಪರಮಾಪ್ತೆಯಾಗಿದ್ದ ವಿ.ಕೆ ಶಶಿಕಲಾ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ, ಎಐಎಡಿಎಂಕೆಯ ಪ್ರಮುಖ ನಾಯಕ ಒ.ಪನ್ನೀರ್‌ಸೆಲ್ವಂ ಅವರ ಸಹೋದರ ಒ. ರಾಜಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಪಕ್ಷದ ವಿಚಾರಕ್ಕೆ ಸಂಬಂಧಿಸಿ ಶಶಿಕಲಾ ಅವರ ಜತೆ ಮಾತುಕತೆ ನಡೆಸುವ ಮೂಲಕ ಪಕ್ಷದ ನಿಯಮ ಹಾಗೂ ಸಿದ್ಧಾಂತಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆಪಾದನೆ ಮೇರೆಗೆ ರಾಜಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಲಾಗಿದೆ.

ಶಶಿಕಲಾ ಅವರನ್ನು ರಾಜಾ ಅವರು ಶುಕ್ರವಾರ ತಿರುಚೆಂಡೂರ್ ದೇವಸ್ಥಾನದಲ್ಲಿ ಶಶಿಕಲಾ ಅವರನ್ನು ಭೇಟಿ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.